masthmagaa.com:
ಕಾಶ್ಮೀರದ ಶೋಪಿಯಾನ್ನಲ್ಲಿ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರನೊಬ್ಬನನ್ನ ಭಾರತೀಯ ಸೇನಾ ಪಡೆ ಎನ್ಕೌಂಟರ್ನಲ್ಲಿ ಹೊಡೆದುರುಳಿಸಿದೆ. ಉಗ್ರ ಬಿಲಾಲ್ ಅಹ್ಮದ್ ಭಟ್ ತಂಗಿದ್ದ ಜಾಗಕ್ಕೆ ನಿಖರ ಮಾಹಿತಿಯೊಂದಿಗೆ ಲಗ್ಗೆ ಇಟ್ಟ ಸೇನೆ ಮೇಲೆ ಉಗ್ರ ಬಿಲಾಲ್ ಗುಂಡಾರಿಸಿದ ಬಳಿಕ ಸೇನೆ ಪ್ರತಿಯಾಗಿ ಗುಂಡಿನ ದಾಳಿ ನಡೆಸಿ ಈತನನ್ನ ಹತ್ಯೆ ಮಾಡಿದೆ ಅಂತ ಗೊತ್ತಾಗಿದೆ. ಅಂದ್ಹಾಗೆ ಜಮ್ಮು-ಕಾಶ್ಮೀರದ ಚೆಕ್ ಚೋಳನ್ ನಿವಾಸಿಯಾಗಿರೋ ಬಿಲಾಲ್ ಅಹ್ಮದ್ ಭಟ್ ಸೇನಾ ಅಧಿಕಾರಿಗಳ ಮತ್ತು ವಲಸೆ ಕಾರ್ಮಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಅಂತ ತಿಳಿದು ಬಂದಿದೆ.
-masthmagaa.com
Contact Us for Advertisement