masthmagaa.com:
ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ತೆಲಂಗಾಣ ಸಿಎಂ ಕೆಸಿಆರ್ ಮೊದಲು ತಮ್ಮ ಸಿಎಂ ಕುರ್ಚಿಯ ಬಗ್ಗೆ ಯೋಚನೆ ಮಾಡಲಿ ಅಂತ ಬಿಜೆಪಿ ಕಿಚಾಯಿಸಿದೆ. ಅಂದ್ಹಾಗೆ ನಿನ್ನೆಯಷ್ಟೇ ಬಿಹಾರ ಸಿಎಂ ನಿತೀಶ್ ಹಾಗೂ ಇನ್ನಿತರ ನಾಯಕರ ಜೊತೆಗೆ ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಭೇಟಿ ಮಾಡಿ ಮಾತುಕತೆ ನಡೆಸಿದ್ರು.ಇದಕ್ಕೆ ಈಗ ವ್ಯಂಗ್ಯವಾಡಿರೋ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ KCR ಮೊದಲು 2023ಕ್ಕೆ ತಮ್ಮ ಸಿಎಂ ಕುರ್ಚಿಯನ್ನ ಉಳಿಸಿಕೊಳ್ಳಲಿ. ಅನಂತರ 2024ರ ಸೀಟ್ ಬಗ್ಗೆ ಮಾತನಾಡೋರಂತೆ ಅಂತ ಕಾಲೆಳೆದಿದ್ದಾರೆ.
-masthmagaa.com
Contact Us for Advertisement