masthmagaa.com:
ಆಮೀರ್ ಸರ್ಫರಾಜ್ ವಿಕೆಟ್ ಉಗ್ರಲೋಕದಲ್ಲಿ ತಲ್ಲಣ ಸೃಷ್ಟಿಸಿದ್ದು ಜಂಘಾಬಲವೇ ಅಡಗಿದೆ…. ಲಷ್ಕರ್ ಕ್ರಿಮಿಗಳು ಆತಂಕದಲ್ಲಿ ದಿಢೀರ್ ಮೀಟಿಂಗ್ ಕರೆದಿವೆ. ಲಷ್ಕರ್ನನ ಮುರಿದ್ಕೆ ಹೆಡ್ಕ್ವಾರ್ಟರ್ಸ್ ಮತ್ತು ಬಹವಲಾಪುರದ ಸಮ್ಮಾ ಸತ್ತ ಆಫೀಸ್ನಲ್ಲಿ ಎರಡು ಹಂತದಲ್ಲಿ ಈ ತುರ್ತುಸಭೆಯನ್ನ ಕರೆಯಲಾಗಿದೆ. ಕಳೆದ ವರ್ಷ ಭಾರತ ವಿರೋಧಿ ಜಂತುಗಳು ಮೇಲಿಂದ ಮೇಲೆ ಉದುರೋಕೆ ಶುರುವಾದ ಮೇಲೆ ಪಾಕ್ನ ಉಗ್ರರಕ್ಷಕ ಪಡೆ ISI ಈ ಆಮೀರ್ನ ಸೆಕ್ಯುರಿಟಿಯನ್ನ ಅವಲೋಕನ ಮಾಡಿ ಅಪ್ಗ್ರೇಡ್ ಮಾಡಿತ್ತಂತೆ… ಹೀಗಿದ್ರು ಕೂಡ ಮುಸುಕುಧಾರಿಗಳು ಅಮೀರನ ಅರಮನೆಯ ಮೊದಲ ಮಹಡಿಗೆ ಬಂದು ಅನಾಯಾಸವಾಗಿ ಹೊಡೆದು ಹಾಕಿರೋದು ISIಗೂ ದಿಗ್ಭ್ರಾಂತಿ ಮೂಡಿಸಿದೆ. ಹೀಗಾಗಿ ಮುಂದೇನು ಮಾಡೋದು ಅಂತ ಎಮರ್ಜೆನ್ಸಿ ಮೀಟಿಂಗ್ ಕರೆದಿವೆ. ಪಾಕ್ ಮೂಲಗಳ ಪ್ರಕಾರ ಮುಸುಕುಧಾರಿಗಳು ಸ್ಥಳೀಯರಾಗಿದ್ದು ಅಮೀರನ ಚಲನವಲನಗಳ ಕುರಿತು ಹಲವು ದಿನ ರೆಕ್ಕೀ ನಡೆಸಿದ್ದರಂತೆ. ಇಸ್ಲಾಂಪೊರಾದ ಹೋಟೆಲ್ಗಳಲ್ಲಿ ಅಮೀರ್ ಭೂರಿಭೋಜನ ನಡೆಸ್ತಿರೋದು, ಗಲ್ಲಿಗಳಲ್ಲಿ ಓಡಾಡ್ತಿರೋ ಫೋಟೋ ವಿಡಿಯೋಗಳನ್ನೆಲ್ಲ ತಗೊಂಡಿದ್ರಂತೆ…. ಒಂದು ಬಾರಿಯಂತೂ ಯಾರೋ ಹಿಂಬಾಲಿಸ್ತಿದ್ದಾರೆ ಅಂತ ಅಮೀರ ಓಡೋಡಿ ಆಟೋ ಹತ್ತಿರೋದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆಯಂತೆ… ಇನ್ನು ಅಮೀರನ ಉಸಿರು ಬಿದ್ದ ತಕ್ಷಣ ಉಗ್ರಪಾಲಕ ಪಾಕ್ ಸೇನೆ ಮತ್ತು ISI ಅವನ ದೇಹವನ್ನ ಅಲ್ಲಿನ ಮಿಲಿಟರಿ ಆಸ್ಪತ್ರೆಗೆ ತಗೊಂಡೋಗಿದ್ರಂತೆ… ಆದ್ರೆ ಇಂಟರೆಸ್ಟಿಂಗ್ ಅಂದ್ರೆ ಪಾಕ್ನ ಕೆಲವು ಮಾಧ್ಯಮಗಳು ʻಅಮೀರ ಇನ್ನಿಲ್ಲʼ ಅಂತ ಪ್ರಸಾರ ಮಾಡಿದ್ರೆ, ಇನ್ನು ಕೆಲವು, ಇಲ್ಲಾ ಇಲ್ಲಾ, ವೆಂಟಿಲೇಟರ್ನಲ್ಲಿ ಇನ್ನೂ ಉಸಿರಾಡ್ತಿದ್ದಾನೆ ಅಂತ ಸುದ್ದಿ ಮಾಡಿವೆ…
ಮತ್ತೊಂದ್ ಕಡೆ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ನ್ನ ಹತ್ಯೆ ಮಾಡಿದ್ದ ಭೂಗತ ಪಾತಕಿ ಈ ಆಮಿರ್ ಸರ್ಫರಾಜ್ ಹತ್ಯೆ ಬಗ್ಗೆ ಪಾಕ್ ತನಿಖೆ ಶುರು ಮಾಡಿದೆ. ಪುನಃ ಭಾರತದ ಮೇಲೆ ಬೊಟ್ಟು ಮಾಡಿದೆ. ಎಸ್…. ಪಾಕ್ ತನಿಖಾ ಸಂಸ್ಥೆಗಳು ಆಮಿರ್ ಸರ್ಫರಾಜ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಅಂತ ಶಂಕಿಸಿದ್ದಾರೆ. ಹೀಗಂತ ಪಾಕ್ನ ಆಂತರಿಕ ಸಚಿವರಾದ ಮೊಹ್ಸಿನ್ ನಖ್ವಿ ಅವ್ರು ಹೇಳಿದ್ದಾರೆ. ʻಆಮಿರ್ ಸರ್ಫರಾಜ್ನ್ನ ಇಬ್ಬರು ಅಪರಿಚಿತರು ಬೈಕ್ ಏರಿ ಬಂದು ಹತ್ಯೆ ಮಾಡಿ ಹೋಗಿದ್ದಾರೆ. ಇದನ್ನ ಗಮಿನಿಸಿದ್ರೆ… ಇದುವರೆಗೆ ಪಾಕ್ನಲ್ಲಿ ಉಗ್ರರ ಹತ್ಯೆ ನಡೆದಿರೋಕೂ ಇದಕ್ಕೂ ಲಿಂಕ್ ಇದೆ. ಈ ಹತ್ಯೆಗಳು ನಡೆದಿರೋ ಪ್ಯಾಟರ್ನ್ ಒಂದಕ್ಕೊಂದು ಹೋಲುತ್ತವೆ. ಇನ್ನು ಪಾಕ್ನಲ್ಲಿ ನಡೆದಿರೋ ಒಟ್ಟು ನಾಲ್ಕು ಹತ್ಯೆಗಳಲ್ಲಿ ಭಾರತ ಇನ್ವಾಲ್ವ್ ಆಗಿರೋ ಶಂಕೆಯಿದೆ. ಸೋ…ಈ ಹತ್ಯೆಯಲ್ಲೂ ಭಾರತದ ಕೈವಾಡವಿರೋ ಹಾಗೆ ಕಾಣ್ತಿದೆ. ಆದ್ರೆ ಈ ಬಗ್ಗೆ ಈ ಕೂಡಲೇ ಯಾವ್ದೇ ರೀತಿ ಸ್ಟೇಟ್ಮೆಂಟ್ ನೀಡಲ್ಲ…ಸದ್ಯ ತನಿಖೆಗೆ ವೈಟ್ ಮಾಡ್ತೀವಿʼ ಅಂತೇಳಿದ್ಧಾರೆ. ಇನ್ನು ಪಾಕ್ನ ಈ ಹೊಸ ಆರೋಪದ ಬಗ್ಗೆ ಇದುವರೆಗೆ ಭಾರತ ಯಾವ್ದೇ ರೀತಿ ರೆಸ್ಪಾಂಡ್ ಮಾಡಿಲ್ಲ.
-masthmagaa.com
Contact Us for Advertisement