masthmagaa.com:
ರಾಜಕೀಯ ಪಕ್ಷಗಳು ಚುನಾವಣಾ ಚಿಹ್ನೆಗಳನ್ನ ಎಕ್ಸ್ಕ್ಲೂಸಿವ್ ಅಂದ್ರೆ ತಮ್ಮ ವಿಶೇಷ ಆಸ್ತಿ ಅಂತ ಪರಿಗಣಿಸೋ ಹಾಗಿಲ್ಲ ಅಂತ ದೆಹಲಿ ಹೈಕೋರ್ಟ್ ಹೇಳಿದೆ. ಜೊತೆಗೆ ಪಕ್ಷದ ಪರ್ಫಾಮೆನ್ಸ್ ಸರಿಯಾಗಿಲ್ಲ ಅಂದ್ರೆ ಚಿಹ್ನೆಯನ್ನ ಬಳಸೋ ಹಕ್ಕನ್ನ ಕಳೆದುಕೊಳ್ಳಬಹುದು ಅಂತ ಕೋರ್ಟ್ ಹೇಳಿದೆ. ಶಿವಸೇನೆಯ ಉದ್ಧವ್ ಠಾಕ್ರೆ ಬಣಕ್ಕೆ ʻಉರಿಯುತ್ತಿರುವ ಜ್ಯೋತಿʼ ಚುನಾವಣಾ ಚಿಹ್ನೆಯನ್ನ ಹಂಚಿಕೆ ಮಾಡೋದ್ರ ವಿರುದ್ಧ ಮನವಿಯನ್ನ ಏಕ ಸದಸ್ಯ ಪೀಠ ತಿರಸ್ಕರಿಸಿತ್ತು. ಇದನ್ನ ಪ್ರಶ್ನಿಸಿ ಸಮತಾ ಪಕ್ಷ ಮೇಲ್ಮನವಿ ಸಲ್ಲಿಸಿದೆ. ಈ ಅರ್ಜಿಯನ್ನೂ ವಜಾಗೊಳಿಸಿದ ಕೋರ್ಟ್ ಹೀಗೆ ಹೇಳಿದೆ. ಅಂದ್ಹಾಗೆ ಸಮತಾ ಪಕ್ಷ ಈ ʻಉರಿಯುತ್ತಿರುವ ಜ್ಯೋತಿʼ ತಮಗೆ ಸೇರಿದ್ದು ಮತ್ತು ಅದ್ರ ಮೇಲೆ ಚುನಾವಣೆಗೆ ಸ್ಪರ್ಧಿಸಿರೋದಾಗಿ ಹೇಳಿಕೊಂಡಿದೆ.
-masthmagaa.com
Contact Us for Advertisement