ಜಾರಿ ನಿರ್ದೇಶನಾಲಯದ ಕಾರ್ಯಚರಣೆ ಬಗ್ಗೆ ಮೋದಿ ಪ್ರತಿಕ್ರಿಯೆ!

masthmagaa.com:

ಇತ್ತೀಚೆಗೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸೇರಿದಂತ ಕೆಲ ವಿಪಕ್ಷ ನಾಯಕರು ಜೈಲು ಸೇರಿರೋದಕ್ಕೆ ಬಿಜೆಪಿ ಸರ್ಕಾರದ ಮೇಲೆ ಬೊಟ್ಟು ಮಾಡ್ತಿರೋ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಒಬ್ಬ ಪ್ರಾಮಾಣಿಕ ವ್ಯಕ್ತಿಗೆ ಯಾವ್ದೇ ರೀತಿ ಭಯ ಪಡಬೇಕಿಲ್ಲ…ಆದ್ರೆ ಭಷ್ಟಚಾರದಲ್ಲಿ ಇನ್ವಾಲ್ವ್‌ ಆಗಿರೋರಿಗೆ ಮಾತ್ರ ಭಯಪಡಬೇಕು. ಜಾರಿ ನಿರ್ದೇಶನಾಲಯದ ಕೇಸ್‌ಗಳ ಪೈಕಿ ಕೇವಲ 3%ನಷ್ಟು ಮಾತ್ರ ರಾಜಕೀಯ ನಾಯಕರದ್ದಾಗಿದೆ…ಇನ್ನುಳಿದವು ರಾಜಕಾರಣಕ್ಕೆ ಸೇರಿಲ್ಲ ಅನ್ನೋದನ್ನ ದೇಶ ಅರ್ಥ ಮಾಡ್ಕೋಬೇಕುʼ ಅಂತೇಳಿದ್ದಾರೆ. ಈ ವೇಳೆ ಮೋದಿಯವ್ರು ಜಾರಿ ನಿರ್ದೇಶನಾಲಯದ ಕಾರ್ಯವನ್ನ ಶ್ಲಾಘಿಸಿದ್ದಾರೆ. ʻನಾನು ಅಧಿಕಾರಕ್ಕೆ ಬಂದಾಗಿನಿಂದ ED ಭ್ರಷ್ಟಚಾರ ನಿಭಾಯಿಸುವಲ್ಲಿ ಗಣನೀಯವಾಗಿ ಕೊಡುಗೆ ನೀಡಿದೆʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply