ಮಕ್ಕಳ ಕಳ್ಳರೆಂದು ಆರೋಪಿಸಿ ಸಾಧುಗಳ ಮೇಲೆ ಹಲ್ಲೆ!

masthmagaa.com:

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳ ಮೇಲೆ ಹಲ್ಲೆ ನಡೆಸಲಾಗಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶ ಮೂಲದ ಸಾಧುಗಳ ಗುಂಪೊಂದು ಇಂದೋರ್​​ನಿಂದ ರತ್ಲಂಗೆ ಹೋಗ್ತಿತ್ತು. ಈ ವೇಳೆ ಧಾರ್ ಜಿಲ್ಲೆಯಲ್ಲಿ ತಮ್ಮ ಕಾರು ನಿಲ್ಲಿಸಿ, ಬಾಲಕನೊಬ್ಬನ ಬಳಿ ರೂಟ್ ಕೇಳಿದ್ದಾರೆ. ಆದ್ರೆ ಆಗ ಆ ಬಾಲಕ ಹೆದರಿ ಓಡಿಹೋಗಿದ್ದಾನೆ. ಇದ್ದಕ್ಕಿದ್ದಂತೆ ಗ್ರಾಮಸ್ಥರೆಲ್ಲಾ ಒಟ್ಟಾಗಿ ಮಕ್ಕಳನ್ನು ಕಿಡ್ನಾಪ್ ಮಾಡಕ್ಕೆ ಬಂದಿದ್ದೀರಿ ಅಂತ ದಾಳಿ ನಡೆಸಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಹೋಗಿ ಸಾಧುಗಳನ್ನು ವಶಕ್ಕೆ ಪಡೆದಿದ್ದಾರೆ.

-masthmagaa.com

Contact Us for Advertisement

Leave a Reply