ಹೆತ್ತ ಮಗನನ್ನೇ ಕೊಂದ ತಾಯಿ! ಮರಣೋತ್ತರ ಪರೀಕ್ಷೆ ಏನ್‌ ಹೇಳ್ತು?

masthmagaa.com:

ಬೆಂಗಳೂರಿನ ಸಿಇಒ ಮಹಿಳೆ ತನ್ನ ಮಗನನ್ನ ಕೊಂದಿರೋ ಕೇಸ್‌ ಸಂಬಂಧ ಇದೀಗ ಪೊಲೀಸರು ಇನ್ನಷ್ಟು ಮಾಹಿತಿ ನೀಡಿದ್ದಾರೆ. ಬಾಲಕನ ಮರಣೋತ್ತರ ಪರೀಕ್ಷೆಯಲ್ಲಿ ʻ ಟವೆಲ್‌ ಅಥ್ವಾ ತಲೆ ದಿಂಬು ಬಳಸಿ, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆʼ ಅಂತ ಹೇಳಿದ್ದಾರೆ. ಇನ್ನು ಈ ಮರ್ಡರ್‌ ಬಗ್ಗೆ ರಿಯಾಕ್ಟ್‌ ಮಾಡಿರೋ ಪೊಲೀಸ್‌, ಈ ಕೊಲೆ ಸಂಪೂರ್ಣವಾಗಿ ಪ್ಲಾನ್ಡ್‌ ಹಾಗೇ ಕಾಣಿಸ್ತಿದೆ. ಜೊತೆಗೆ ಆರೋಪಿ ಸುಚನಾ ಸೇಠ್‌ ಮತ್ತವ್ರ ಮಗನಿದ್ದ ಗೋವಾ ಹೋಟೆಲ್‌ ರೂಮ್‌ನಲ್ಲಿ ಎರಡು ಕಾಫ್‌ ಸಿರಪ್‌ ಬಾಟಲ್‌ಗಳು ಪತ್ತೆಯಾಗಿದ್ವು. ಇವುಗಳ ಪೈಕಿ ಒಂದು ಬಾಟಲ್‌ನ ಸುಚನಾ ಸೇಠ್‌ ತಂದಿದ್ರೆ, ಇನ್ನೊಂದು ಬಾಟಲ್‌ನ ಇವ್ರು ಹೋಟೆಲ್‌ ಸಿಬ್ಬಂದಿ ಹತ್ರ ರಿಕ್ವೆಸ್ಟ್‌ ಮಾಡಿ ತರ್ಸಿದ್ದಾರೆ ಅಂದಿದಾರೆ. ಹೀಗಾಗಿ ಈ ವಿಚಾರ ಕೂಡ ಪೋಲಿಸರಿಗೆ ಅನುಮಾನ ಹುಟ್ಟಿಸಿದೆ. ಅಂದ್ಹಾಗೆ ಈ ಪ್ರಕರಣ ತಿಳಿತಿದ್ದಂತೆ ಮೃತ ಬಾಲಕನ ತಂದೆ ವೆಂಕಟ್‌ ರಮನ್‌ ಇಂಡೋನೇಷ್ಯಾದಿಂದ ಭಾರತಕ್ಕೆ ಬಂದಿಳಿದಿದ್ದಾರೆ. ಮರಣೋತ್ತರ ಪರೀಕ್ಷೆಗೆ ಅವ್ರೇ ಒಪ್ಪಿಗೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply