masthmagaa.com:
ಬಾಬಾ ರಾಮ್ದೇವ್ ಅವ್ರ ಪತಂಜಲಿ ಕಂಪನಿಯ ವಿವಾದಾತ್ಮಕ ಜಾಹೀರಾತು ಪ್ರಕರಣ ಸಂಬಂಧ ಇಂದು ಪುನಃ ವಿಚಾರಣೆ ನಡೆದಿದೆ. ಈ ವೇಳೆ ಸುಪ್ರೀಂ ಕೋರ್ಟ್ ಮತ್ತೆ ಬಾಬಾ ರಾಮ್ದೇವ್ ಮತ್ತು ಪತಂಜಲಿಯ ಅಧ್ಯಕ್ಷರಾದ ಬಾಲಕೃಷ್ಣ ಅವ್ರನ್ನ ತರಾಟೆಗೆ ತೆಗೆದ್ಕೊಂಡಿದೆ. ನೀವು ಅಷ್ಟೊಂದೇನು ಮುಗ್ದರಲ್ಲ ಅಂತ ಕೋರ್ಟ್ ಹೇಳಿದೆ. ʻಯೋಗಕ್ಕೆ ನಿಮ್ಮ ಕೊಡುಗೆಯನ್ನ ನಾವು ಗೌರವಿಸ್ತೀವಿ. ಆದ್ರೆ ಈ ಕೇಸ್ ಸಂಬಂಧ ನಾವು ನಿಮ್ಮನ್ನ ಕ್ಷಮಿಸ್ಬೇಕೋ ಬೇಡ್ವೋ ಅನ್ನೋದ್ರ ಬಗ್ಗೆ ಇನ್ನೂ ಡಿಸೈಡ್ ಮಾಡಿಲ್ಲ. ನಾವು ನೀಡಿರೋ ನಿರ್ದೇಶನಗಳನ್ನ ನೀವು ಮೂರು ಬಾರಿ ಉಲ್ಲಂಘನೆ ಮಾಡಿದ್ರಿ. ಕೋರ್ಟ್ನಲ್ಲಿ ಏನಾಗ್ತಿದೆ ಅಂತ ತಿಳಿಯದಿರುವಷ್ಟೇನು ನೀವು ಇನೊಸೆಂಟ್ ಅಲ್ಲʼ ಅಂತೇಳಿದ್ದಾರೆ. ಈ ವೇಳೆ ಬಾಬಾ ರಾಮ್ದೇವ್ ಮತ್ತು ಬಾಲಕೃಷ್ಣ ಅವ್ರು, ʻನಾವು ಸಾರ್ವಜನಿಕವಾಗಿ ಕ್ಷಮೆ ಕೇಳೋಕೆ ರೆಡಿ ಇದ್ದೀವಿ. ಸುಪ್ರೀಂ ಕೋರ್ಟ್ ಪ್ರತಿಷ್ಠೆಗೆ ಧಕ್ಕೆ ತರೋದು ನಮ್ಮ ಉದ್ದೇಶವಲ್ಲ ಹಾಗೂ ಭವಿಷ್ಯದಲ್ಲಿ ನಾವು ಈ ವಿಚಾರವಾಗಿ ಬಹಳ ಕೇರ್ಫುಲ್ ಆಗಿರ್ತೀವಿʼ ಅಂದಿದ್ದಾರೆ. ಇನ್ನು ಈ ಕೇಸ್ಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯನ್ನ ಸುಪ್ರೀಂ ಕೋರ್ಟ್ ಏಪ್ರಿಲ್ 23ಕ್ಕೆ ಡೇಟ್ ಫಿಕ್ಸ್ ಮಾಡಿದೆ.
-masthmagaa.com
Contact Us for Advertisement