ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ʻಹಾರ್ಡ್‌ಕೋರ್‌ ಹಿಂದೂʼ ಎಂದ TMC ಸಂಸದ!

masthmagaa.com:

ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಇತ್ತೀಚೆಗೆ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವನ್ನ ಹೆಚ್ಚುವರಿಯಾಗಿ ನೀಡಲಾಗಿತ್ತು. ಇದರ ಹಿನ್ನಲೆಯಲ್ಲಿ TMC ಸಂಸದ ಜವಾಹರ್‌ ಸರ್ಕಾರ್‌ ಸ್ಮೃತಿ ಇರಾನಿಯನ್ನ ಹಾರ್ಡ್‌ಕೋರ್‌ ಹಿಂದೂ ಅಂತ ಕರೆದಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರೋ ಜವಾಹರ್‌, ಪಾರ್ಸಿಯನ್ನ ಮದ್ವೆಯಾಗಿರೋ ಹಾರ್ಡ್‌ಕೋರ್‌ ಹಿಂದೂಗೆ ಮುಸ್ಲಿಂ, ಕ್ರೈಸ್ತರ ಅಧಿಕಾರವನ್ನ ನೀಡಲಾಗಿದೆ. ಇದು ಬಿಜೆಪಿಯ ಜಾತ್ಯತೀತತೆಯೇ?? ಅಂತ ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಕೇಂದ್ರ ಮಂತ್ರಿ ಕಿರಣ್‌ ರಿಜಿಜು, ನಿಮ್ಮ ಮನಸ್ಸನ್ನ ಹುಸಿ ಜಾತ್ಯಾತೀತತೆ ಮತ್ತು ಓಲೈಕೆ ರಾಜಕೀಯದಿಂದ ಸ್ವತಂತ್ರಗೊಳಿಸಿ ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply