ಬಿಹಾರಿಗಳು ಟಾಯ್ಲೆಟ್‌ ಕ್ಲೀನ್‌ ಮಾಡೊಕ್ಕೆ ತಮಿಳುನಾಡಿಗೆ ಬರ್ತಾರೆ!

masthmagaa.com:

ಹಿಂದಿ ಮಾತನಾಡೋ ಯುಪಿ, ಬಿಹಾರದ ಜನತೆ ತಮಿಳುನಾಡಿಗೆ ಟಾಯ್ಲೆಟ್‌ ಕ್ಲೀನ್‌ ಮಾಡೋಕೆ ಅಥ್ವಾ ಕಟ್ಟಡ ನಿರ್ಮಾಣ ಕೆಲಸಕ್ಕೆ ಬರ್ತಾರೆ ಅಂತ ಡಿಎಂಕೆ ಸಂಸದ ದಯಾನಿಧಿ ಮಾರನ್‌ ಹೇಳಿರೋ ವಿಡೀಯೋ ವೈರಲಾಗಿದೆ. ಈ ವೀಡಿಯೋ ಭಾರಿ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ ಈ ವಿಡೀಯೋ ಪೋಸ್ಟ್ ಮಾಡಿ I.N.D.I ಕೂಟದ ನಾಯಕರನ್ನ ತರಾಟೆಗೆ ತೆಗೆದು ಕೊಂಡಿದ್ದಾರೆ. ನೀವ್‌ ದೇಶವನ್ನ ಒಡೆದು ಆಳ್ತಿದ್ದೀರಾ? ಅಂತ ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ. ಅಂದ್ಹಾಗೆ ಈ ವಿಡೀಯೋದಲ್ಲಿ ಮಾರನ್‌ ಇಂಗ್ಲೀಷ್‌ ಮಾತಾಡೊರು ಐಟಿ ಕಂಪನಿಯಲ್ಲಿ ವರ್ಕ್‌ ಮಾಡ್ತಾರೆ. ಆದ್ರೆ ಹಿಂದಿ ಮಾತಾಡೊರು ಸಣ್ಣ ಪುಟ್ಟ ಕೆಲ್ಸ ಮಾಡ್ತಾರೆ ಅಂತ ವ್ಯಂಗ್ಯವಾಡಿದ್ದಾರೆ ಅಂತ ಹೇಳಲಾಗ್ತಿದೆ. ಇದಕ್ಕೆ ರಿಯಾಕ್ಟ್‌ ಮಾಡಿರೋ ಬಿಹಾರದ ಬಿಜೆಪಿ ಸಂಸದ ರವಿಶಂಕರ್‌ ಪ್ರಸಾದ್‌, “DMK ಲೀಡರ್ಸ್‌ ಮೊದ್ಲು ಬಿಹಾರದ ಜನರನ್ನ ನಿಂದಿಸೋದನ್ನ ಬೀಡಬೇಕು. ಹಾಗೂ ನಿತೀಶ್‌ ಕುಮಾರ್‌ I.N.D.I ಕೂಟದ ಭಾಗವಾಗಿರೋದ್ರಿಂದ ಅವ್ರ ನೇತೃತ್ವದಲ್ಲಿ ಬಿಹಾರದ ಜನ ತಮಿಳುನಾಡಿಗೆ ಹೋಗ್ತಾರೆ” ಅಂತ ಹೇಳಿದ್ದಾರೆ. ಸದ್ಯ ಭಾಷೆ ವಿಚಾರವಾಗಿ I.N.D.I ಕೂಟದಲ್ಲಿ ಭುಗಿಲೆದ್ದಿರೋ ಹೊಗೆ ದೇಶದಲ್ಲಿ ಭಾರಿ ಸದ್ದು ಮಾಡ್ತಿರೋದು ವಿಪರ್ಯಾಸವೇ ಸರಿ.

-masthmagaa.com

Contact Us for Advertisement

Leave a Reply