masthmagaa.com:
ಚಂದನವನದ ಚೆಲುವೆ, ಕನ್ನಡದ ಮಹಾನಟಿ ಲೀಲಾವತಿ ಬಾರದ ಲೋಕಕ್ಕೆ ತೆರಳಿದ್ದಾರೆ. ಕಲಾದೇವಿಗೆ ಇಡೀ ಸ್ಯಾಂಡಲ್ವುಡ್ ಕಣ್ಣೀರ ವಿದಾಯ ಹೇಳಿದೆ. ಬೆಂಗಳೂರಿನ ಸೋಲದೇವನ ಹಳ್ಳಿಯಲ್ಲಿರುವ ತೋಟದಲ್ಲಿ ಲೀಲಾವತಿ ಅವರ ಅಂತ್ಯಕ್ರಿಯೆ ಇಂದು ನೆರವೇರಿದೆ. ದಕ್ಷಿಣ ಕನ್ನಡ ಬೆಳ್ತಂಗಡಿ ಮೂಲದವರಾದ ನಟಿ ಲೀಲಾವತಿ ಅವರ ಅಂತ್ಯ ಸಂಸ್ಕಾರ ಬಂಟರ ಸಂಪ್ರದಾಯದಂತೆ ನಡೆದಿದೆ. ಮಗ ವಿನೋದ್ ರಾಜ್ ಅವರು ಅಂತಿಮ ವಿಧಿವಿಧಾನವನ್ನು ನೆರವೇರಿಸಿದ್ರು. ಇದಕ್ಕೂ ಮುಂಚೆ ಬೆಳಿಗ್ಗೆಯಿಂದ ನೆಲ ಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಪಾರ್ಥಿವ ಶರೀರವನ್ನ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ತಂದ ಪಾರ್ಥಿವ ಶರೀರದ ಅಂತಮ ದರ್ಶನವನ್ನ ಸಿನಿ ದಿಗ್ಗಜರು ಪಡೆದ್ರು ಬಳಿಕ ನೇರವಾಗಿ ಲೀಲಾವತಿ ನಿವಾಸಕ್ಕೆ ಪಾರ್ಥಿವ ಶರೀರ ಕರೆತರಲಾಯ್ತು. ಸೋಲದೇವನ ಹಳ್ಳಿಯಲ್ಲಿರುವ ನಿವಾಸದಲ್ಲಿ ಅಂತಿಮ ಪೂಜೆಗಳು ನಡೆದು ಬಂಟರ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ಆ ಮೂಲಕ ಕನ್ನಡ ಚಿತ್ರ ರಂಗದ ಮಹಾನಟಿಯ ಪಯಣ ಬಾರದ ಲೋಕಕ್ಕೆ ಸಾಗಿದೆ.
-masthmagaa.com
Contact Us for Advertisement