masthmagaa.com:
ನಿನ್ನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ದೆಹಲಿಗೆ ಬರಬೇಕಾಗಿದ್ದ 16 ವಿಮಾನಗಳನ್ನು ಬೇರೆಡೆ ಡೈವರ್ಟ್ ಮಾಡಲಾಗಿದೆ ಅಂತ ವಿಮಾನಯಾನ ಅಧಿಕಾರಿಗಳು ಹೇಳಿದ್ದಾರೆ. ಸೋಮವಾರ ಸಂಜೆ ದೆಹಲಿಯಲ್ಲಿ ವರುಣ ಅಬ್ಬರಿಸಿದರಿಂದಾಗಿ ದೆಹಲಿ ರೀಚ್ ಆಗಬೇಕಿದ್ದ 10 ವಿಮಾನಗಳನ್ನ ಜೈಪುರ್ಗೆ, 3 ವಿಮಾನಗಳನ್ನ ಲಕ್ನೋಗೆ, 1 ವಿಮಾನ ಅಹ್ಮದಾಬಾದ್ಗೆ ಹಾಗೂ ಎರಡು ವಿಮಾನಗಳನ್ನ ಅಮೃತಸರ್ಗೆ ಸ್ಥಳಾಂತರಿಸಲಾಗಿದೆ. ಜೊತೆಗೆ ದೆಹಲಿಯಲ್ಲಿನ ಕೆಟ್ಟ ಹವಾಮಾನ ಹಾಗೂ ವಾಯು ಸಂಚಾರ ದಟ್ಟಣೆಯಿಂದಾಗಿ ಗುವಾಹಟಿಯಿಂದ ದೆಹಲಿಗೆ ಬಂದ ವಿಸ್ತಾರಾ ವಿಮಾನವನ್ನು ಜೈಪುರದಲ್ಲಿ ಲ್ಯಾಂಡ್ ಮಾಡಲಾಗಿದೆ ಅಂತ ಏರಲೈನ್ಸ್ ತಿಳಿಸಿದೆ. ಅಂದಹಾಗೆ ಇಂದಿನಿಂದ ದೆಹಲಿ ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್ನಲ್ಲಿ ಮಂಜಿನ ವಾತಾವರಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
-masthmagaa.com
Contact Us for Advertisement