ರಾಮ ಮಂದಿರಕ್ಕೆ ಬಾಂಬ್‌ ಬೆದರಿಕೆ ಹಾಕಿದ್ದವರ ಬಂಧನ!

masthmagaa.com:

ರಾಮ ಮಂದಿರಕ್ಕೆ ಬಾಂಬ್‌ ಬೆದರಿಕೆ ಹಾಗೂ ಯೋಗಿ ಆದಿತ್ಯನಾಥ್‌ ಹತ್ಯೆ ಬೆದರಿಕೆ ಹಾಕಿದ್ದ ಇಬ್ಬರನ್ನ ಯುಪಿ ಸ್ಪೆಷಲ್‌ ಟಾಸ್ಕ್‌ ಫೋರ್ಸ್ ಅರೆಸ್ಟ್‌ ಮಾಡಿದೆ. ಕಳೆದ ಕೆಲ ದಿನಗಳ ಹಿಂದೆ ಥಾಹರ್‌ ಸಿಂಗ್‌, ಓಂ ಪ್ರಕಾಶ್‌ ಮಿಶ್ರಾ ಅನ್ನೊರು ಜುಬೇರ್ ಖಾನ್‌, ಆಲಂ ಸಾರಿಖ್ ಅನ್ನೊ ನಕಲಿ ಹೆಸರುಗಳಲ್ಲಿ ಇ-ಮೇಲ್‌ ಮೂಲಕ ಬೆದರಿಕೆ ಹಾಕಿದ್ರು. ಅಂದ್ಹಾಗೆ ಯುಪಿಯ ಗೊಂಡಾ ಮೂಲದವರಾದ ಇವ್ರು ಪ್ಯಾರಾ ಮೆಡಿಕಲ್‌ ಸಂಸ್ಥೆಯೊಂದರಲ್ಲಿ ಕೆಲಸ ಮಾಡ್ತಿದ್ರು ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply