masthmagaa.com:
ಮಾಜಿ ಸಿಎಂ ಕುಮಾರಸ್ವಾಮಿ ಕರೆಂಟ್ ಕದ್ದಿದ್ದಾರೆ. ಅವ್ರು ಕರೆಂಟ್ ಕಳ್ಳ ಅಂತ ರಾಜ್ಯಾದ್ಯಂತ ಟೀಕೆಗೆ ಒಳಗಾಗಿದ್ರು. ಈಗ ಬೆಸ್ಕಾಂಗೆ ದಂಡ ಕಟ್ಟಿರುವ HDK ತಮ್ಮನ್ನು ಟ್ರೋಲ್ ಮಾಡಿದೋರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಅದ್ರಲ್ಲೂ ಕಾಂಗ್ರೆಸ್ ಸರ್ಕಾರವನ್ನ ಜಾಡಿಸಿದ್ದಾರೆ. “ನಾನೇನೊ ದಂಡ ಕಟ್ಟಿದೆ. ಆದ್ರೆ ಲುಲು ಮಾಲ್ 6 ತಿಂಗಳಿಂದ ಬಿಲ್ ಕಟ್ಟಿಲ್ಲ. ಅದನ್ಯಾರು ಕಟ್ತಾರೆ? ಡಿಸಿಎಂ ಡಿಕೆ ಶಿವಕುಮಾರ್ ಅವರ ಪಾಲುದಾರಿಕೆ ಇರೊ ಲುಲು ಮಾಲ್ ಶುರುವಾಗೊ 6 ತಿಂಗಳು ಮುಂಚೆಯಿಂದ್ಲೆ ಕರೆಂಟ್ ಬಳಸಿದ್ದಾರೆ. ಮಾಲ್ ಕಟ್ಟಿರೋದೆ 24 ಎಕರೆ ಖರಾಬು ಭೂಮಿಯಲ್ಲಿ. ಆ ಭೂಮಿಯ ದಾಖಲೆಗಳನ್ನು ಸುಟ್ಟು ನಾಶ ಮಾಡಿದ್ದಾರೆ. ಅವರಿಗೆ ಬಿಲ್ ಹಾಕಿದ್ದೀರ? ನಾನು ನಿಮ್ಮಷ್ಟು ದೊಡ್ಡ ಕಳ್ಳ ಅಲ್ಲ. ನೀವು ಹಗಲು ದರೋಡೆಕೋರರು. ಮೇಕೆದಾಟು ಪಾದಯಾತ್ರೆಗೆ ಯಾವ ಕರೆಂಟ್ ತಗೊಂಡಿದ್ರಿ? ಕನಕಪುರದ ಕನಕೋತ್ಸವಕ್ಕೆ ಎಲ್ಲಿಂದ ಕರೆಂಟ್ ಬಂತು?” ಅಂತ ಪ್ರಶ್ನಿಸಿದ್ದಾರೆ. ಅಲ್ಲದೆ 71 ಯೂನಿಟ್ ವಿದ್ಯುತ್ಗೆ 3 ಪಟ್ಟು ದಂಡ ಹಾಕಿದ್ದಾರೆ. 2,526 ರೂಪಾಯಿ ದಂಡ ಹಾಕ್ಬೇಕಿತ್ತು. ಆದ್ರೆ ನನ್ನ ಮನೆಗೆ ತಗೊಂಡಿರೊ 33 kV ವಿದ್ಯುತ್ ಬಳಕೆ ಸೇರಿ 68,526 ರೂಪಾಯಿ ದಂಡ ವಿಧಿಸಿದ್ದಾರೆ. ಒಬ್ಬ ಮಾಜಿ ಸಿಎಂಗೆ ಹಿಂಗಾದ್ರೆ ಸಾಮಾನ್ಯ ಜನರ ಕಥೆ ಏನು? ಅಂತ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ವಿದ್ಯುತ್ ಬಿಲ್ ಸರಿ ಇಲ್ಲ, ನಿಮ್ಮ ಲೆಕ್ಕಾಚಾರವನ್ನ ಇನ್ನೊಮ್ಮೆ ಪರಿಶೀಲನೆ ಮಾಡಿ ಅಂತ ಬೆಸ್ಕಾಂಗೆ ಪತ್ರ ಬರೆದಿರೋದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಇತ್ತ ಲುಲು ಮಾಲ್ ವಿಚಾರವಾಗಿ ಎಚ್ಡಿಕೆ ಆರೋಪಕ್ಕೆ ರಿಪ್ಲೈ ಮಾಡಿರೊ ಡಿಕೆ ಶಿವಕುಮಾರ್ ಮಾಲ್ ಕಟ್ಟಿದ್ದು ನಾನಲ್ಲ. ಬೇರೆ ಬೇರೆ ಡೆವಲಪರ್ಗಳು ಸೇರಿ ಕಟ್ಟಿದ್ದಾರೆ. ನಮ್ಮ ಸ್ನೇಹಿತರಿಂದ ನಾನು ಆ ಮಾಲ್ ಖರೀದಿ ಮಾಡಿದ್ದೇನೆ. 15 ವರ್ಷದ ಹಿಂದೆಯೆ ಜಾಗದ ಬಗ್ಗೆ ತನಿಖೆ ಆಗಿದೆ. ನಾನು ಎಲ್ಲಕ್ಕೂ ಸಿದ್ಧನಿದ್ದೇನೆ. ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ಅಂದಿದ್ದಾರೆ.
-masthmagaa.com
Contact Us for Advertisement