masthmagaa.com:
ಚುನಾವಣೆ ದಿನಾಂಕ ಘೋಷಣೆ ಆದ ಬೆನ್ನಲ್ಲೇ ಆ ಕಡೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ದೊಡ್ಡ ಘೋಷಣೆ ಮಾಡಿದಾರೆ. ಕರ್ನಾಟಕದಲ್ಲಿರುವ ಎಲ್ಲಾ ಕ್ಷೇತ್ರಗಳಲ್ಲೂ ಅಂದ್ರೆ 224 ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳು ಕಂಟೆಸ್ಟ್ ಮಾಡ್ತಾರೆ ಅಂತ ಅನೌನ್ಸ್ ಮಾಡಿದ್ದಾರೆ. ಈ ಮೂಲಕ ರಾಜ್ಯದ ಎಲೆಕ್ಷನ್ ಅನ್ನೋ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದು ಕರ್ನಾಟಕದ ಅಧಿಕಾರ ಹಿಡಿಯೋಕೆ ತಾವೂ ಕೂಡ ದೊಡ್ಡ ಸ್ಪರ್ಧಿ ಅಂತ ತೋರಿಸೋ ಪ್ರಯತ್ನ ಮಾಡಿದಾರೆ. ಅಷ್ಟೆ ಅಲ್ಲ ಗುಜರಾತ್ ಮಾದರಿಯಲ್ಲೇ ಕರ್ನಾಟಕ ಎಲೆಕ್ಷನ್ನ್ನ ಕೂಡ ಸಿರೀಯಸ್ ಆಗಿ ತೆಗೆದುಕೊಂಡಿದ್ದೀನಿ ಅನ್ನೋದನ್ನ ಸಾಕ್ಷೀಕರಿಸಿದ್ದಾರೆ.
-masthmagaa.com
Contact Us for Advertisement