masthmagaa.com:
ಮಂಗಳೂರು ವಿಭಾಗದ KSRTC ಇಂದ ದೀಪಾವಳಿ ಪ್ರಯುಕ್ತ ವಿಶೇಷ ಟೂರ್ ಪ್ಯಾಕೇಜ್ ಒಂದನ್ನ ಘೋಷಿಸಲಾಗಿದೆ. ದೀಪಾವಳಿ ಪ್ರಯುಕ್ತ ಅಕ್ಟೋಬರ್ 21 ರಿಂದ 27ರವರೆಗೆ ಟೂರ್ ಪ್ಯಾಕೇಜ್ನ್ನು ಪರಿಚಯಿಸಲಿದೆ. ಇದ್ರಲ್ಲಿ ಕುಂದಾಪುರ, ಉಡುಪಿ, ದಕ್ಷಿಣ ಕನ್ನಡದ ಸುತ್ತಮುತ್ತಲಿನ ದೇವಾಲಯಗಳ ದರ್ಶನ ಮಾಡೋಕೆ 5 ರಿಂದ 10 KSRTC ಬಸ್ಗಳು ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಲಿವೆ ಅಂತ KSRTC ಚೇರ್ಮನ್ ಚಂದ್ರಪ್ಪ ಮಾಹಿತಿ ನೀಡಿದ್ದಾರೆ. ಹಾಗೇ ನೊಂದಾಯಿತ ಕಟ್ಟಡ ಮತ್ತು ಇತರ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ನೀಡಲು KSRTC ನಿರ್ಧರಿಸಿದೆ. ಜೊತೆಗೆ ಫ್ರೀ ಬಸ್ ಪಾಸ್ ಇದ್ದವರು ಬಸ್ ಹತ್ತುವ ಸ್ಥಳದಿಂದ 45 ಕಿ.ಮೀ ದೂರ ಉಚಿತವಾಗಿ ಪ್ರಯಾಣಿಸಬಹುದು. ಅಂದ್ಹಾಗೆ ಈ ಹಿಂದೆ ದಸರಾ ಸಂದರ್ಭದಲ್ಲಿ ಕೂಡ KSRTC ಇಂದ ಮಂಗಳೂರು ದಸರಾ ದರ್ಶನ ಪ್ಯಾಕೇಜ್ ಟೂರ್ ಮಾಡಲಾಗಿತ್ತು.
-masthmagaa.com
Contact Us for Advertisement