masthmagaa.com:
ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇಶ್ ಚಂದ್ರ ಶೇಖರ್ ಕೇಸ್ನಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವ್ರ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನವೆಂಬರ್ 15ಕ್ಕೆ ಮುಂದೂಡಿದೆ. ಅಲ್ಲಿವರೆಗೂ ನಟಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಮಂಗಳವಾರ ಏನಾಗುತ್ತೋ ಅನ್ನೋ ಆತಂಕ ನಟಿಗೆ ಶುರುವಾಗಿದೆ. ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದಾರೆ. ಜೊತೆಗೆ ಈ ಕೇಸ್ಗೆ ಸಂಬಂಧಿಸಿದಂತೆ ಹಲವರನ್ನು ಅರೆಸ್ಟ್ ಮಾಡಲಾಗಿದೆ. ಆದ್ರೆ ಜಾಕ್ವೆಲಿನ್ರನ್ನು ಯಾಕೆ ಅರೆಸ್ಟ್ ಮಾಡಿಲ್ಲ ಅಂತ ಕೋರ್ಟ್ ನಿನ್ನೆಯಷ್ಟೆ ಪ್ರಶ್ನೆ ಮಾಡಿತ್ತು. ಈಗಾಗಲೇ ತನಿಖೆ ಪೂರ್ಣಗೊಂಡು ಚಾರ್ಜ್ ಶೀಟ್ ಸಲ್ಲಿಕೆಯಾಗಿರೋದ್ರಿಂದ ಕಸ್ಟಡಿಯ ಅಗತ್ಯವಿಲ್ಲ ಅಂತ ಜಾಕ್ವಲಿನ್ ಜಾಮೀನು ಕೋರಿದ್ದರು.
-masthmagaa.com
Contact Us for Advertisement