masthmagaa.com:
ಮಹಾರಾಷ್ಟ್ರ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಗೆ ಕಾರಣರಾಗಿದ್ದ NCP ನಾಯಕ ಹಾಗೂ ಡಿಸಿಎಂ ಅಜಿತ್ ಪವಾರ್ ನೇತೃತ್ವದ ಬಣ ಇಂದು NCP ಮುಖ್ಯಸ್ಥ ಶರದ್ ಪವಾರ್ ಅವ್ರನ್ನ ಭೇಟಿ ಮಾಡಿದ್ದಾರೆ. ಬಳಿಕ ಮಾತಾಡಿರುವ NCP ನಾಯಕ ಪ್ರಫುಲ್ ಪಟೇಲ್, ನಾವೆಲ್ಲರೂ ದೇವರಿಗೆ ಸಮಾನರಾದ ಶರದ್ ಪವಾರ್ ಅವರ ಆಶೀರ್ವಾದ ಪಡೆಯಲು ಬಂದಿದಿವಿ ಅಂತ ಹೇಳಿದ್ದಾರೆ. ಇದೇ ವೇಳೆ ಬಿರುಕು ಮೂಡಿರುವ ಪಕ್ಷವನ್ನ ಮತ್ತೆ ಒಗ್ಗೂಡಿಸುವಂತೆ ಶರದ್ ಪವಾರ್ ಅವ್ರನ್ನ ಮನವಿ ಮಾಡಿಕೊಂಡಿದ್ದೇವೆ. ಆದ್ರೆ ಇದಕ್ಕೆ ಶರದ್ ಪವಾರ್ ಅವ್ರು ಯಾವುದೆ ಪ್ರತಿಕ್ರಿಯೆ ನೀಡದೆ ಸುಮ್ಮನೆ ಕೇಳಿಸಿಕೊಂಡರು ಅಂತ ಪ್ರಫುಲ್ ಹೇಳಿದ್ದಾರೆ.
-masthmagaa.com
Contact Us for Advertisement