masthmagaa.com:
25 ಸಾವಿರ ಕೋಟಿ ವೆಚ್ಚದ ಬ್ಯಾಂಕ್ ಹಗರಣವೊಂದರಲ್ಲಿ ಮಹಾರಾಷ್ಟ್ರದ ಡಿಸಿಎಂ ಅಜೀತ್ ಪವಾರ್ ಪತ್ನಿ ಸುನೇತ್ರಾ ಅವ್ರಿಗೆ ಮಾಹಾರಾಷ್ಟ್ರ ಪೋಲಿಸ್ ಇಲಾಖೆ ಕ್ಲೀನ್ ಚಿಟ್ ನೀಡಿದೆ. ಈ MSCB ಬ್ಯಾಂಕ್ ಹಗರಣದ ಕೇಸ್ನ ವಿಚಾರವಾಗಿ ತಕ್ಷಣವೇ ಪ್ರತಿಕ್ರಿಯೆ ನೀಡಿರೊ ಉದ್ದವ ಬಣದ ಶಿವಸೇನೆ, ಪೋಲಿಸ್ ಇಲಾಖೆಯ ಈ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ. ಅಂದ್ಹಾಗೆ ಈ ಸುನೇತ್ರಾ ಅವ್ರು ಸದ್ಯ ಬಾರಾಮತಿ ಕ್ಷೇತ್ರದಲ್ಲಿ ಶರದ್ ಪವಾರ್ ಅವ್ರ ಪುತ್ರಿ ಸುಪ್ರಿಯಾ ಸುಳೆ ವಿರುದ್ದ ಲೋಕಸಭೆ ಎಲೆಕ್ಷನ್ನಲ್ಲಿ ಕಣಕ್ಕಿಳಿದಿದ್ದಾರೆ.
-masthamagaa.com
Contact Us for Advertisement