ಮದ್ಯ ನೀತಿ ಹಗರಣ! ಕೋರ್ಟ್‌ ಮುಂದೆ ಕೇಜ್ರಿವಾಲ್‌ ಹಾಜರು!

masthmagaa.com:

ಅಬಕಾರಿ ನೀತಿ ಹಗರಣ ಸಂಬಂಧ ಬೆನ್ಬೆನ್ನಿಗೆ ಜಾರಿ ನಿರ್ದೇಶನಾಲದ ಸಮನ್ಸ್‌ ತಳ್ಳಿ ಹಾಕಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಈಗ ಕೋರ್ಟ್‌ ಆದೇಶಕ್ಕೆ ಭಾಗಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ದೆಹಲಿ ರೋಸ್‌ ಅವೆನ್ಯೂ ಕೋರ್ಟ್‌ ಎದುರು ಫೆಬ್ರುವರಿ 17 ರಂದು ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಮಾತನಾಡಿದ ಅವ್ರು, ʻವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮತ್ತು ಬಜೆಟ್‌ ಅಧಿವೇಶನ ನಡೀತಿರೋದ್ರಿಂದ ಕೋರ್ಟ್‌ ಮುಂದೆ ಫಿಸಿಕಲಿ ಹಾಜರಾಗಲು ಸಾಧ್ಯವಾಗಿಲ್ಲʼ ಅಂದಿದ್ದಾರೆ. ಆದ್ರಿಂದ ಇದೀಗ ಕೋರ್ಟ್‌ ಕೇಜ್ರಿವಾಲ್‌ ಅವ್ರಿಗೆ ಮಾರ್ಚ್‌ 16 ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚನೆ ನೀಡಿದೆ.

-masthmagaa.com

Contact Us for Advertisement

Leave a Reply