masthmagaa.com:
ಭಾರತ ಹಾಗೂ ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವ್ರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಲಡಾಖ್ ಗಡಿಯಲ್ಲಿ ನಿಜವಾಗ್ಲು ಏನಾಗ್ತಿದೆ ಅಂತ ಹೇಳದೆ ಮೋದಿಯವರು ಮುಚ್ಚಿಡುತ್ತಿದ್ದಾರೆ. ಮೋದಿಯವರೇ ಚೀನಾದ ಬಳಿ ಮಾತುಕತೆ ನಡೆಸಲು ಬಯಸಿದ್ದರು ಅಂತ ಚೀನಾ ವಿದೇಶಾಂಗ ಇಲಾಖೆ ಹೇಳಿದೆ. ಆದ್ರೆ ಭಾರತದ ವಿದೇಶಾಂಗ ಸಚಿವಾಲಯ ಇನ್ನೇನೋ ಹೇಳ್ತಿದೆ. ಅದ್ಯಾಕೆ ಮೋದಿಯವರು ಮಾತುಕತೆ ನಡೆಸೋಕೆ ಜಿನ್ಪಿಂಗ್ ಹಿಂದೆ ಬಿದ್ದಿದ್ದಾರೆ ಅಂತ ನಾನು ಬಿಜೆಪಿಯನ್ನ ಕೇಳೋಕೆ ಬಯಸುತ್ತೇನೆ. ಜೊತೆಗೆ ಭಾರತ ಕಳೆದುಕೊಂಡಿರುವ 2 ಸಾವಿರ ಸ್ಕ್ವೆಯರ್ ಕಿಲೋಮೀಟರ್ ಪ್ರದೇಶದ ಕುರಿತು ಡಿಸ್ಕಸ್ ಮಾಡಲು ಸಂಸತ್ತಿನ ವಿಶೇಷ ಅಧಿವೇಶನ ಕರಿಯಬೇಕು ಅಂತ ಓವೈಸಿ ಹೇಳಿದ್ದಾರೆ.
-masthmagaa.com
Contact Us for Advertisement