ಬಬಲೇಶ್ವರ, ವಿಜಯಪುರ: ಅಪ್ಪನಿಗೆ ಟಿಕೆಟ್‌ ಸಿಕ್ಕಿದ್ದಕ್ಕೆ, ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ಮಗ

masthmagaa.com:

ವಿಜಯಪುರದ ಬಬಲೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ವಿಜುಗೌಡ ಪಾಟೀಲ ಅವ್ರಿಗೆ ಬಿಜೆಪಿ ಟಿಕೆಟ್‌ ಘೋಷಣೆಯಾದ ಟೈಮಲ್ಲಿ ಅವರ ಪುತ್ರ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ವಿಡಿಯೋಗಳನ್ನ ಇದೀಗ ಕಾಂಗ್ರೆಸ್‌ ಬಿಡುಗಡೆ ಮಾಡಿದೆ. ಅಲ್ದೇ ವಿಜುಗೌಡ ಹಾಗೂ ಅವರ ಪುತ್ರ ಸಮರ್ಥಗೌಡ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದೆ. ಮಾಜಿ ಸಚಿವ ಎಂಬಿ ಪಾಟೀಲ ವಿರುದ್ಧ ಒಬ್ಬ ಗೂಂಡಾ ಅಭ್ಯರ್ಥಿಗೆ ಟಿಕೆಟ್‌ ನೀಡಿ ತನ್ನ ಸಂಸ್ಕೃತಿಯನ್ನ ಬಿಜೆಪಿ ಅನಾವರಣಗೊಳಿಸಿದೆ ಅಂತ ಕಾಂಗ್ರೆಸ್‌ ಆರೋಪಿಸಿದೆ.

-masthmagaa.com

Contact Us for Advertisement

Leave a Reply