masthmagaa.com:
ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ಮಾಡಿಸ್ತೀನಿ ಅಂತ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಕ್ಯಾಪ್ಟನ್ ಕೂಲ್ MS ಧೋನಿ ಮ್ಯಾನೇಜರ್ ಸ್ವಾಮಿನಾಥನ್ ಅವ್ರಿಗೆ ವಂಚಿಸಿದ್ದಾನೆ. ಈತ ತಾನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವ್ರ P.A. ನನ್ನ ಹೆಸ್ರು ನಕುಲ್, ನಾನೊಬ್ಬ IAS ಅಧಿಕಾರಿ ಅಂತೇಳ್ಕೊಂಡು ಸ್ವಾಮಿನಾಥನ್ ಅವ್ರಿಗೆ ಪರಿಚಯವಾಗಿದ್ದ. ಬಳಿಕ ತಿರುಪತಿ ತಿಮ್ಮಪ್ಪನ ದರ್ಶನ, ಟ್ರಸ್ಟ್ ಒಂದರ ಡೊನೇಷನ್ಗೆ ಅಂತ ಸ್ವಾಮಿನಾಥನ್ ಹಾಗೂ ಅವ್ರ ಮಿತ್ರನಿಂದ 6.5 ಲಕ್ಷ ರೂಪಾಯಿ ಹಣ ಪಡೆದಿದ್ದಾನೆ. ಇದ್ರಲ್ಲಿ 3 ಲಕ್ಷ ತಿಮ್ಮಪ್ಪನ ದರ್ಶನಕ್ಕೆ ಅಂತ ತಗೊಂಡಿದ್ದಾನೆ. ಆಮೇಲೆ ಕಾಲ್ ಮಾಡಿದ್ರೆ ಆಸಾಮಿ ನಾಪತ್ತೆ. ಇದೀಗ ಸ್ವಾಮಿನಾಥನ್ ಬೆಂಗಳೂರಿನ HSR ಲೇಔಟ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
-masthmagaa.com
Contact Us for Advertisement