ಧೋನಿ ಮ್ಯಾನೇಜರ್‌ಗೆ ತಿರುಪತಿ ತಿಮ್ಮಪ್ಪನ್ನ ಹೆಸರಲ್ಲಿ ಭಾರಿ ವಂಚನೆ!

masthmagaa.com:

ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ಮಾಡಿಸ್ತೀನಿ ಅಂತ‌ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಕ್ಯಾಪ್ಟನ್‌ ಕೂಲ್ MS ಧೋನಿ ಮ್ಯಾನೇಜರ್‌ ಸ್ವಾಮಿನಾಥನ್‌ ಅವ್ರಿಗೆ ವಂಚಿಸಿದ್ದಾನೆ. ಈತ ತಾನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವ್ರ P.A. ನನ್ನ ಹೆಸ್ರು​​ ನಕುಲ್, ನಾನೊಬ್ಬ​​ IAS ಅಧಿಕಾರಿ ಅಂತೇಳ್ಕೊಂಡು ​ಸ್ವಾಮಿನಾಥನ್‌ ಅವ್ರಿಗೆ ಪರಿಚಯವಾಗಿದ್ದ. ಬಳಿಕ ತಿರುಪತಿ ತಿಮ್ಮಪ್ಪನ ದರ್ಶನ, ಟ್ರಸ್ಟ್‌ ಒಂದರ ಡೊನೇಷನ್‌ಗೆ ಅಂತ ಸ್ವಾಮಿನಾಥನ್‌ ಹಾಗೂ ಅವ್ರ ಮಿತ್ರನಿಂದ 6.5 ಲಕ್ಷ ರೂಪಾಯಿ ಹಣ ಪಡೆದಿದ್ದಾನೆ. ಇದ್ರಲ್ಲಿ 3 ಲಕ್ಷ ತಿಮ್ಮಪ್ಪನ ದರ್ಶನಕ್ಕೆ ಅಂತ ತಗೊಂಡಿದ್ದಾನೆ. ಆಮೇಲೆ ಕಾಲ್‌ ಮಾಡಿದ್ರೆ ಆಸಾಮಿ ನಾಪತ್ತೆ. ಇದೀಗ ಸ್ವಾಮಿನಾಥನ್‌ ಬೆಂಗಳೂರಿನ HSR ಲೇಔಟ್ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

-masthmagaa.com

Contact Us for Advertisement

Leave a Reply