masthmagaa.com:
ಆಪರೇಷನ್ ಮಾಡಲು ಬಂದ ವೈದ್ಯನೊಬ್ಬ ಮದ್ಯ ಸೇವನೆಯಿಂದ ಫುಲ್ ಟೈಟಾಗಿ ಕುಸಿದು ಬಿದ್ದ ಘಟನೆ ಚಿಕ್ಕಮಗಳೂರಿನ ಕಳಸ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಕ್ಯಾಂಪ್ ಆಯೋಜಿಸಲಾಗಿತ್ತು. ಆಪರೇಷನ್ಗಾಗಿ 9 ಮಹಿಳೆಯರಿಗೆ ಬೆಳಗ್ಗೇನೇ ಅನಸ್ತೇಷಿಯಾ ನೀಡಲಾಗಿತ್ತು. ಆದ್ರೆ ಬಾಲಕೃಷ್ಣ ಅನ್ನೊ ವೈದ್ಯ ಮಧ್ಯಾಹ್ನ 2 ಗಂಟೆಯಾದ್ರೂ ಆಪರೇಷನ್ ಮಾಡಿಲ್ಲ. ಹೋಗಿ ನೋಡಿದ್ರೆ ಆಪರೇಷನ್ ಥಿಯೇಟರ್ನಲ್ಲೆ ವೈದ್ಯ ನಿದ್ರೆ ಮಾಡಿದ್ದಾನೆ. ವೈದ್ಯ ಮದ್ಯಪಾನ ಮಾಡಿ ಮಲಗಿರೋದಾಗಿ ರೋಗಿಗಳ ಸಂಬಂಧಿಕರಿಂದ ಆರೋಪ ಕೇಳಿಬಂದಿದೆ. ಘಟನೆ ಬೆನ್ನಲ್ಲೇ ವೈದ್ಯ ಬಾಲಕೃಷ್ಣ ಅಮಾನತ್ತಿಗೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಚಿಕ್ಕಮಗಳೂರು ಡಿಹೆಚ್ಒಗೆ ಆದೇಶ ನೀಡಿದ್ದಾರೆ.
-masthmagaa.com
Contact Us for Advertisement