masthmagaa.com:
ಮಹಾರಾಷ್ಟ್ರದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಕೇಳಿದ್ದ 23 ಲೋಕಸಭಾ ಸೀಟ್ಗಳಿಗೆ ಕಾಂಗ್ರೆಸ್ ನೋ ಅಂದಿದೆ. ಕಾಂಗ್ರೆಸ್, NCP ಹಾಗೂ ಶಿವ ಸೇನೆ (UBT)ಒಳಗೊಂಡ ಮಹಾರಾಷ್ಟ್ರ ವಿಕಾಸ್ ಅಗಾಢಿ ಮೀಟಿಂಗ್ನಲ್ಲಿ ಈ ನಿರ್ಧಾರ ವ್ಯಕ್ತವಾಗಿದೆ. ಪಕ್ಷ ವಿಭಜನೆಗೊಂಡು ಉದ್ಧವ್ ಬಣಕ್ಕೆ ನಂಬರ್ಸ್ ಕೊರತೆ ಇರೋ ಈ ಟೈಮಲ್ಲಿ 23 ಸೀಟ್ ಕೊಡೋದು ಕಷ್ಟ ಅಂತ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಹೇಳಿದ್ದಾರೆ. ಇತ್ತ ರಾಮ ಮಂದಿರ ನಿರ್ಮಾಣದಲ್ಲಿ ಹಾಗೂ 1992ರ ಬಾಬ್ರಿ ಮಸೀದಿ ಧ್ವಂಸದಲ್ಲಿ ಬಿಜೆಪಿ ಪಾತ್ರ ಏನಿದೆ ಅಂತ ಶಿವಸೇನಾ (UBT) ವಕ್ತಾರ ಸಂಜಯ್ ರಾವುತ್ ಪ್ರಶ್ನಿಸಿದ್ದಾರೆ. ರಾಮ ಮಂದಿರ ಕಾರ್ಯಕ್ರಮಕ್ಕೆ ಹೋಗಲು ಉದ್ದವ್ ಠಾಕ್ರೆಗೆ ಆಹ್ವಾನ ನೀಡಬೇಕಿಲ್ಲ, ಬಾಳಾಸಾಹೇಬ ಠಾಕ್ರೆ ಮತ್ತು ಶಿವಸೇನೆಯ ಕೊಡುಗೆಯನ್ನ ಬಿಜೆಪಿ ಮರೆತಿದೆ ಅಂತ ರಾವುತ್ ಅಸಮಾಧಾನ ಹೊರಹಾಕಿದ್ದಾರೆ.
-masthmagaa.com
Contact Us for Advertisement