masthmagaa.com:
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಪ್ರಬಲ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಣಕ್ಕಿಳಿಯೋದು ಫಿಕ್ಸ್ ಆಗಿದೆ. ಹೀಗಂತ ಪುತ್ತಿಲ ಪರಿವಾರದ ಸದಸ್ಯರೊಬ್ರು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಅರುಣ್ ಮತ್ತೆ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲೂ ಕಂಟಕವಾಗೊ ಸಾಧ್ಯತೆ ಇದೆ. ಅಂದ್ಹಾಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಪಕ್ಷೇತರರಾಗಿ ಕಣಕ್ಕಿಳಿದಿದ್ರು. ಕಾಂಗ್ರೆಸ್ನ ಅಶೋಕ್ ರೈ ವಿರುದ್ದ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದ ಅರುಣ್, ಬಿಜೆಪಿಗಿಂತ ಅಧಿಕ ಮತ ಪಡೆದಿದ್ರು. ಆದ್ರೆ ಇದೀಗ ಲೋಕಸಭೆಗೂ ಸ್ವತಂತ್ರವಾಗಿ ಕಣಕ್ಕಿಳಿತಾರೆ ಅಂತ ಅವ್ರ ಆಪ್ತರು ಹೇಳ್ತಿದ್ದಾರೆ.
-masthmagaa.com
Contact Us for Advertisement