masthmagaa.com:
ದೆಹಲಿಯ ಸಂತನಗರದಲ್ಲಿ ದೀಪಾವಳಿ ಹಬ್ಬದ ದಿನ ತೆರೆದಿದ್ದ ಬಿರಿಯಾನಿ ಅಂಗಡಿಯನ್ನು ಬಲವಂತವಾಗಿ ಬಂದ್ ಮಾಡಿಸಿರೋ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಭಜರಂಗದಳದ ನಾಯಕ ನರೇಶ್ ಕುಮಾರ್ ಸೂರ್ಯವಂಶಿ ಅಂತ ಹೇಳಿಕೊಂಡಿರೋ ವ್ಯಕ್ತಿ, ಅಂಗಡಿ ತೆರೆದ ಮುಸ್ಲಿಂ ಯುವಕರಿಗೆ ಬೆದರಿಕೆ ಹಾಕೋದನ್ನ ಕಾಣಬಹುದು.. ಇವತ್ತು ನಮ್ಮ ದೀಪಾವಳಿ ಹಬ್ಬ.. ಇದು ಹಿಂದೂಗಳ ಏರಿಯಾ.. ಹೀಗಿರುವಾಗ ಇವತ್ತು ಕೂಡ ಬಿರಿಯಾನಿ ಅಂಗಡಿ ಓಪನ್ ಮಾಡಿದ್ಯಾಕೆ..? ಯಾರ ಪರ್ಮಿಷನ್ ಕೇಳಿ ಅಂಗಡಿ ಓಪನ್ ಮಾಡಿದ್ದೀರಿ..? ಇದನ್ನೇನು ಜಾಮಿಯಾ ಮಸೀದಿ ಏರಿಯಾ ಅಂದುಕೊಂಡಿದ್ದೀಯಾ..? ಬೆಂಕಿ ಬೀಳುತ್ತೆ ಹುಷಾರ್.. ಇನ್ನು ಯಾವತ್ತೂ ಹಬ್ಬದ ದಿನ ಬಿರಿಯಾನಿ ಅಂಗಡಿ ಓಪನ್ ಮಾಡ್ಬೇಡ ಅಂತ ಬೆದರಿಕೆ ಹಾಕಲಾಗಿದೆ. ಮುಸ್ಲಿಂ ಯುವಕರು ಕೂಡಲೇ ಅಂಗಡಿ ಬಾಗಿಲು ಮುಚ್ಚೋದು ಕೂಡ ಇದ್ರಲ್ಲಿ ಸೆರೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿರೋ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದ್ರೆ ಈವರೆಗೂ ಯಾರನ್ನೂ ಬಂಧಿಸಿಲ್ಲ.
-masthmagaa.com
Contact Us for Advertisement