masthmagaa.com:
ರಾಜ್ಯ ಸರ್ಕಾರದ 5 ಗ್ಯಾರೆಂಟಿ ಯೋಜನೆಗಳಲ್ಲಿ ಮೊದಲ ಗ್ಯಾರಂಟಿ ಗೃಹಜ್ಯೋತಿ ಯೋಜನೆಯನ್ನ ಸರ್ಕಾರ ಜಾರಿ ಮಾಡಿದೆ. ಜೂನ್ 2 ಅಂದ್ರೆ ನಿನ್ನೆ ಸಿಎಂ ಸಿದ್ದರಾಮಯ್ಯ ಅವ್ರು ಸುದ್ದಿಗೋಷ್ಠಿ ನಡೆಸಿ 5 ಗ್ಯಾರೆಂಟಿ ಯೋಜನೆಗಳನ್ನ ಜಾರಿ ಮಾಡಿದ್ದಾರೆ. ಆದ್ರೆ ಗೃಹಜ್ಯೋತಿ ಯೋಜನೆ ಕುರಿತಾಗಿ ಜನರಲ್ಲಿ ಹಲವು ಅನುಮಾನ ಹಾಗೂ ಗೊಂದಲಗಳಿವೆ. ಹೀಗಾಗಿ ಇದಕ್ಕೆಇಂಧನ ಸಚಿವ ಕೆಜೆ ಜಾರ್ಜ ಅವ್ರು ಸ್ಪಷ್ಟನೆ ನೀಡಿದ್ದಾರೆ. ಯಾವ ಬಾಡಿಗೆದಾರರೂ ವಿದ್ಯುತ್ ಬಿಲ್ ಕಟ್ಟಬೇಕಿಲ್ಲ. ನಾವು ಆರ್ಆರ್ ಸಂಖ್ಯೆ ಆಧಾರದ ಮೇಲೆ ಯುನಿಟ್ ಪರಿಗಣಿಸುತ್ತೇವೆ ಅಂತ ಹೇಳಿದ್ದಾರೆ. ಇನ್ನು ಬಾಡಿಗೆದಾರರನ್ನ ಪ್ರತ್ಯೇಕವಾಗಿ ಗುರುತಿಸುವ ಪ್ರಶ್ನೆಯೇ ಬರೋದಿಲ್ಲ. ಮಾಲೀಕರೇ ಆಗಲೀ ಅಥ್ಬಾ ಬಾಡಿಗೆದಾರರೇ ಆಗಲಿ ಆರ್ ಆರ್ ಸಂಖ್ಯೆ ಆಧಾರದ ಮೇಲೆ ಮೀಟರ್ ರೀಡ್ ಮಾಡಲಾಗುತ್ತೆ ಹಾಗೂ 200 ಯುನಿಟ್ ಒಳಗಡೆ ಬಳಸಿದ್ದರೆ ಉಚಿತ ನೀಡುತ್ತೇವೆ ಅಂತ ತಿಳಿಸಿದ್ದಾರೆ.
-masthmagaa.com
Contact Us for Advertisement