ಬಾಡಿಗೆ ಮನೆಯಲ್ಲಿರುವವರಿಗೂ ವಿದ್ಯುತ್‌ ಫ್ರೀ…!

masthmagaa.com:

ರಾಜ್ಯ ಸರ್ಕಾರದ 5 ಗ್ಯಾರೆಂಟಿ ಯೋಜನೆಗಳಲ್ಲಿ ಮೊದಲ ಗ್ಯಾರಂಟಿ ಗೃಹಜ್ಯೋತಿ ಯೋಜನೆಯನ್ನ ಸರ್ಕಾರ ಜಾರಿ ಮಾಡಿದೆ. ಜೂನ್‌ 2 ಅಂದ್ರೆ ನಿನ್ನೆ ಸಿಎಂ ಸಿದ್ದರಾಮಯ್ಯ ಅವ್ರು ಸುದ್ದಿಗೋಷ್ಠಿ ನಡೆಸಿ 5 ಗ್ಯಾರೆಂಟಿ ಯೋಜನೆಗಳನ್ನ ಜಾರಿ ಮಾಡಿದ್ದಾರೆ. ಆದ್ರೆ ಗೃಹಜ್ಯೋತಿ ಯೋಜನೆ ಕುರಿತಾಗಿ ಜನರಲ್ಲಿ ಹಲವು ಅನುಮಾನ ಹಾಗೂ ಗೊಂದಲಗಳಿವೆ. ಹೀಗಾಗಿ ಇದಕ್ಕೆಇಂಧನ ಸಚಿವ ಕೆಜೆ ಜಾರ್ಜ ಅವ್ರು ಸ್ಪಷ್ಟನೆ ನೀಡಿದ್ದಾರೆ. ಯಾವ ಬಾಡಿಗೆದಾರರೂ ವಿದ್ಯುತ್ ಬಿಲ್ ಕಟ್ಟಬೇಕಿಲ್ಲ. ನಾವು ಆರ್​​ಆರ್ ಸಂಖ್ಯೆ ಆಧಾರದ ಮೇಲೆ ಯುನಿಟ್​​ ಪರಿಗಣಿಸುತ್ತೇವೆ ಅಂತ ಹೇಳಿದ್ದಾರೆ. ಇನ್ನು ಬಾಡಿಗೆದಾರರನ್ನ ಪ್ರತ್ಯೇಕವಾಗಿ ಗುರುತಿಸುವ ಪ್ರಶ್ನೆಯೇ ಬರೋದಿಲ್ಲ. ಮಾಲೀಕರೇ ಆಗಲೀ ಅಥ್ಬಾ ಬಾಡಿಗೆದಾರರೇ ಆಗಲಿ ಆರ್ ಆರ್ ಸಂಖ್ಯೆ ಆಧಾರದ ಮೇಲೆ ಮೀಟರ್​​ ರೀಡ್​ ಮಾಡಲಾಗುತ್ತೆ ಹಾಗೂ 200 ಯುನಿಟ್​​ ಒಳಗಡೆ ಬಳಸಿದ್ದರೆ ಉಚಿತ ನೀಡುತ್ತೇವೆ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply