ವಿಯೆಟ್ನಾಮ್‌ಗೆ ಹಾರಿದ ಸಚಿವ ಎಸ್.ಜೈಶಂಕರ್: ಚೀನಾ ವಿರುದ್ಧ ಕಾರ್ಯತಂತ್ರ?

masthmagaa.com:

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.‌ ಜೈಶಂಕರ್‌ ವಿಯೆಟ್ನಾಮ್‌ಗೆ 4 ದಿನಗಳ ಪ್ರವಾಸಕ್ಕಾಗಿ ತೆರಳಿದ್ದಾರೆ. ಉಭಯ ದೇಶಗಳ ನಡುವೆ 18ನೇ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿದ್ದು, ಹಾನೋಯ್‌ನಲ್ಲಿ ನಿನ್ನೆ ವಿಯೆಟ್ನಾಮ್‌ನ ವಿದೇಶಾಂಗ ಸಚಿವ ಬುಯ್‌ ಥಾನ್‌ ಸೊನ್‌ ಅವರನ್ನ ಮೀಟ್‌ ಮಾಡಿದ್ದಾರೆ. ಈ ವೇಳೆ ಮಾತಾಡಿರೊ ಜೈಶಂಕರ್‌, ಸ್ಥಿರವಾದ ಹಾಗೂ ಸುರಕ್ಷಿತ ಇಂಡೋ-ಪೆಸಿಫಿಕ್‌ ಹೊಂದಲು ಭಾರತಕ್ಕೆ ವಿಯೆಟ್ನಾಮ್‌ ಸೇರಿದಂತೆ ಎಲ್ಲಾ ASEAN ರಾಷ್ಟ್ರಗಳ ಜೊತಗಿನ ಸಂಬಂಧ ಬಹಳ ಮುಖ್ಯ ಅಂತ ಹೇಳಿದ್ದಾರೆ. ಹಾಗೇ ವಿಯೆಟ್ನಾಮ್‌ ಜೊತೆಗೆ ವ್ಯಾಪಾರ, ಎನರ್ಜಿ, ರಕ್ಷಣೆ ಹಾಗೂ ಕಡಲ ಭದ್ರತೆ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನ ಬೂಸ್ಟ್‌ ಮಾಡುವ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ.

-masthmagaa.com

Contact Us for Advertisement

Leave a Reply