ಮುಂದಿನ ಸಿಎಂ ಸಿಟಿ ರವಿ ಆಗಲೀ: ಕೆ ಎಸ್‌ ಈಶ್ವರಪ್ಪ

masthmagaa.com:

ರಾಜ್ಯದ ಮುಂದಿನ ಸಿಎಂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆಗಲೀ ಅಂತ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ. ಚಿಕ್ಕಮಗಳೂರಿನ ನಿಡಘಟ್ಟದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ಚಿಕ್ಕಮಗಳೂರಿನಿಂದ ಸಿಟಿ ರವಿಯನ್ನ ಗೆಲ್ಲಿಸಿ. ಅವರೇ ಮುಂದಿನ ಸಿಎಂ ಆಗಲಿ ಅಂತ ಹೇಳಿದ್ದಾರೆ. ಅಂದ್ಹಾಗೆ ನಿನ್ನೆ ಮೈಸೂರಿನಲ್ಲಿ ಮಾತಾಡಿದ್ದ ರವಿ, ಸಿಎಂ ಆಗುವ ಆಸೆಯನ್ನ ಹೊರಹಾಕಿದ್ರು. ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ. ಆದ್ರೆ ಈ ಕೂಗು ಕೇವಲ ಕ್ಷೇತ್ರದಲ್ಲಿದೆ. ರಾಜ್ಯದಲ್ಲಿ ಕೂಗು ಕೇಳಿದಾಗ ಈ ಬಗ್ಗೆ ಮಾತಾಡುವೆ ಎಂದಿದ್ರು.

-masthmagaa.com

Contact Us for Advertisement

Leave a Reply