masthmagaa.com:
ಹೊಂದಾಣಿಕೆ ರಾಜಕಾರಣದ ಆರೋಪ ಮಾಡಿದವ್ರ ವಿರುದ್ಧ ಇವತ್ತು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕೆಂಡಾಮಂಡಲರಾಗಿದ್ದಾರೆ ಎನ್ನಲಾಗಿದೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಭೆ ನಡೆಸಲಾಗಿದ್ದು, ಈ ವೇಳೆ ಬೊಮ್ಮಾಯಿ, ರಾಜಕಾರಣದಲ್ಲಿ ಕಷ್ಟಪಟ್ಟು ಬಿಳಿ ಶರ್ಟ್ ಹಾಕಿಕೊಂಡಿರ್ತೇವೆ. ನೀವು ಬಂದು ಉಗಿದು ಹೋಗ್ತಾ ಇರ್ತೀರಿ. ಜೊತೆಗೆ ಆರೋಪದ ಶಾಯಿ ಅಂದ್ರೆ ಇಂಕ್ನ್ನ ನಮಗೆ ಎಸೀತಾ ಇರ್ತೀರಿ. ಆದ್ರೆ ಅದರ ಹಿಂದೆ ಏನಾಗಿರುತ್ತೆ ಅನ್ನೋದು ನಿಮಗೆ ಗೊತ್ತಿರಲ್ಲ. ನೀವು ಮಾಡಿರೋ ಕಲೆಯನ್ನ ಅಳಿಸೋಕೆ ಬಹಳ ಸಮಯ ಬೇಕು. ಈ ರೀತಿ ಯಾರೂ ಮಾಡ್ಬಾರ್ದು ಅಂತ ಬೊಮ್ಮಾಯಿ ಪರೋಕ್ಷವಾಗಿ ಯತ್ನಾಳ್ ವಿರುದ್ಧ ಕುಟುಕಿದ್ದಾರೆ ಎನ್ನಲಾಗಿದೆ. ಇನ್ನು ಅತ್ತ ನೋಟಿಸ್ ಬಗ್ಗೆ ಮಾತಾಡಿರುವ ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ, ನಾನು ಮಾಡಿರುವ ಆರೋಪಗಳಿಗೆ ನಾನು ಬದ್ಧ. ಪಕ್ಷವನ್ನು ಉಳಿಸುವಂತೆ ನಾನು ಹೈಕಮಾಂಡ್ ಗೆ ಪತ್ರ ಬರೆಯುತ್ತೇನೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement