masthmagaa.com:
ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರೊ ನೇಹಾ ಹತ್ಯೆ ಕೇಸ್ ವಿಚಾರವಾಗಿ ಆರೋಪಿ ಫಯಾಜ್ ಕೆಲ ಮಹತ್ವದ ವಿಚಾರಗಳನ್ನ ಬಾಯ್ಬಿಟ್ಟಿದ್ದಾನೆ. ಸದ್ಯ ಧಾರವಾಡ ಜಿಲ್ಲಾ ಕಾರಾಗೃಹದಲ್ಲಿರೊ ಫಯಾಜ್, ʻನೇಹಾ ನನ್ನ ಜೊತೆ ಮಾತಾಡಲ್ಲ ಅಂದ್ಲು ಅದಕ್ಕೆ ನಾನು ಚಾಕು ಹಾಕಿದೆʼ ಅಂತ ಜೈಲು ಸಿಬ್ಬಂದಿ ಮುಂದೆ ಹೇಳ್ಕೊಂಡಿದ್ದಾನೆ. ಅಲ್ದೇ ಘಟನೆಗೂ ಒಂದು ವಾರ ಮುಂಚೆಯೇ ನೇಹಾಳನ್ನ ಮಾತಾಡಿಸಲು ಕಾಲೇಜ್ ಬಳಿ ಹೋಗಿದ್ದೆ. ಆದ್ರೆ ಅವ್ಳು ʻನಿನ್ ಜೊತೆ ಮಾತಾಡಲು ಇಷ್ಟವಿಲ್ಲ ಅಂತೇಳಿ ನನ್ನ ಅವಾಯ್ಡ್ ಮಾಡಿದ್ಲು. ಹೀಗಾಗಿ ಏಪ್ರಿಲ್ 18 ರಂದು ಪರೀಕ್ಷೆ ಬರೆಯಲು ಬಂದಿದ್ದ ನೇಹಾಗಾಗಿ ಅವ್ಳ ಪರೀಕ್ಷೆ ಮುಗಿಯೋವರೆಗೂ ಕಾದೆ. ಪರೀಕ್ಷೆ ಬರೆದು ಹೊರ ಬಂದ ನಂತ್ರ ಅವ್ಳನ್ನ ಮಾತಾಡಿಸಲು ಹೋದೆ. ಆದ್ರೆ ಅವ್ಳು ನಿನ್ನ ಜೊತೆ ಮಾತಾಡಲ್ಲ ಅಂದ್ಲು. ಅದಕ್ಕೆ ಚಾಕುವಿನಿಂದ ಇರಿದೆʼ ಅಂತ ಫಯಾಜ್ ತಿಳಿಸಿದ್ದಾನೆ.
ಇನ್ನು ನೇಹಾ ತಂದೆ ನಿರಂಜನ್ ಈಗ ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಆರೋಪಿ ಫಯಾಜ್ ನಿಮ್ಮ ಮಗಳನ್ನ ಪ್ರೀತಿಸ್ತೇನೆ, ಆಕೆಯನ್ನ ನನಗೆ ಮದುವೆ ಮಾಡ್ಕೊಡಿ. ನಾನ್ ಬೇಕಾದ್ರೆ ನಿಮ್ಮ ಸಮಾಜಕ್ಕೆ ಕನ್ವರ್ಟ್ ಆಗ್ತೇನೆ ಅಂತೇಳಿದ್ದ. ಆದ್ರೆ ನಮ್ಮ ಸಮಾಜದಲ್ಲಿ ಹೀಗೆ ಇರುವಂತಿಲ್ಲ. ನೀವು ಬೆಸ್ಟ್ ಫ್ರೆಂಡ್ಸ್. ಆತನಿಗೆ ಭವಿಷ್ಯ ನೋಡ್ಕೊ ಅಂತ ನಾನೇ ಹೇಳಿದ್ದೆ. ಒನ್ ಸೈಡ್ ಲವ್ ಇರೋದ್ರಿಂದ ಎಲ್ಲರಿಗೂ ಬೆದರಿಕೆ ಹಾಕಿದ್ದ. ನೇಹಾಳನ್ನ ತನ್ನ ಬುಟ್ಟಿಗೆ ಹಾಕೊಳ್ಳಬೇಕಂತ ನೋಡಿದ್ದಾನೆ. ಫಯಾಜ್ಗೆ ಅವ್ರ ತಾಯಿ ಹಾಗೂ ಅವ್ರ ಸಹೋದರಿ ಕೂಡ ಪ್ರಚೋದನೆ ಕೊಟ್ಟಿದ್ದಾರೆ ಅಂತ ನಿರಂಜನ್ ಆರೋಪಿಸಿದ್ದಾರೆ.
ರಾಜ್ಯದೆಲ್ಲೆಡೆ ನೇಹಾ ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆಗಳ ಪ್ರತಿಭಟನೆಗಳು ಜೋರಾದ ಬೆನ್ನಲ್ಲೆ ಏಪ್ರಿಲ್ 22 ರಂದು ಅರ್ಧ ದಿನ ಧಾರವಾಡ ಬಂದ್ಗೆ ಮುಸ್ಲಿಂ ಸಂಘಟನೆಗಳು ಕರೆ ಕೊಟ್ಟಿವೆ. ಅಲ್ದೇ ʻನಮ್ಮ ಅಂಗಡಿಗಳ ಮೇಲೆ “ಜಸ್ಟೀಸ್ ಫಾರ್ ನೇಹಾ” ಅಂತ ಬರೆದು ಸ್ಟಿಕರ್ ಅಂಟಿಸ್ತೇವೆʼ ಅಂತ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ಹೇಳಿದ್ದಾರೆ. ಇನ್ನು ಹತ್ಯೆಯಾದ ನೇಹಾ, ಆರೋಪಿ ಫಯಾಜ್ ಜೊತೆ ರಿಲೇಷನ್ಶಿಪ್ನಲ್ಲಿ ಇದ್ಲು ಅಂತೇಳಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಇಬ್ಬರನ್ನ ಬಂಧಿಸಲಾಗಿದೆ.
ಇದೇ ಪ್ರಕರಣದ ವಿಚಾರವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ನೇಹಾ ಅವ್ರ ಮನೆಗೆ ಭೇಟಿ ನೀಡಿ, ಪಾಲಕರಿಗೆ ಸಾಂತ್ವಾನ ಹೇಳಿ, ನ್ಯಾಯ ಕೊಡಿಸೊದಾಗಿ ಭರವಸೆ ನೀಡಿದ್ದಾರೆ. ಇನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಕೂಡ ಮೃತ ನೇಹಾಳ ಭೇಟಿ ನೀಡಿ, ನೇಹಾಳ ಪಾಲಕರಿಂದ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಸಾಂತ್ವಾನ ಹೇಳಿದ್ದಾರೆ. ಇನ್ನು ನೇಹಾ ಹತ್ಯೆ ಖಂಡಿಸಿ ಏಪ್ರಿಲ್ 22 ರಂದು ಬಿಜೆಪಿ ರಾಜ್ಯಾದ್ಯಂತ ಭಾರಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
-masthmagaa.com
Contact Us for Advertisement