masthmagaa.com:
ಬಿಜೆಪಿ ದೇಶದಲ್ಲಿ ಮುಸ್ಲಿಮರ ವಿರುದ್ಧ ಯುದ್ಧ ಸಾರಿದೆ ಅಂತ ಎಐಎಂಐಎಂ ಮುಖ್ಯಸ್ಥ ಅಸಾವುದ್ದಿನ ಓವೈಸಿ ಆರೋಪಿಸಿದ್ದಾರೆ. ಹೈದರಾಬಾದ್ನ ಮೆಕ್ಕಾ ಮಸೀದೀ ಬಳಿ ಮಾತಾಡಿರೋ ಅವ್ರು, ಬಿಜೆಪಿ ದೇಶದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಹರಡ್ತಾ ಇದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಸ್ಲಿಮರ ಮೇಲೆ ಯುದ್ಧ ಸಾರಿದೆ. ಮುಸ್ಲಿಮರು ತಾಳ್ಮೆ ಮತ್ತು ಧೈರ್ಯ ಕಳೆದುಕೊಳ್ಳಬಾರ್ದು ಅಂತ ಹೇಳಿದ್ದಾರೆ. ಇನ್ನು ಇದೇ ಸಮಯದಲ್ಲಿ ಜಹಂಗೀರ್ಪುರಿ ಮತ್ತು ಖರ್ಗೊನೆ ಘಟನೆಗಳ ಬಗ್ಗೆ ಮಾತಾಡ್ತಾ ಅವ್ರು ಅಳ್ತಾ ಇರೋ ರೀತಿ ಕಂಡುಬಂದಿದೆ.
-masthmagaa.com
Contact Us for Advertisement