masthmagaa.com:
ದ್ವೇಶಭಾಷಣ ಮಾಡಿದ ಎರಡು ಪ್ರಕರಣದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿರಿಯ ಸಹೋದರ ಅಕ್ಬರುದ್ದೀನ್ ಓವೈಸಿಯನ್ನ ಹೈದರಾಬಾದ್ನ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಸಂಬಂಧ ಟ್ವೀಟ್ ಮಾಡಿರೋ ಅಸಾದುದ್ದೀನ್ ಓವೈಸಿ, ಎಂಪಿ/ಎಂಎಲ್ಎಗಳ ವಿಶೇಷ ನ್ಯಾಯಾಲಯ ಅಕ್ಬರುದ್ದೀನ್ನ್ನ ಖುಲಾಸೆಗೊಳಿಸಿದೆ. ಸಹಾಯ ಮಾಡಿದ ವಕೀಲ ಅಬ್ದುಲ್ ಅಜೀಂ ಮತ್ತು ಅವ್ರ ತಂಡಕ್ಕೆ ಧನ್ಯವಾದಗಳು ಅಂತ ಹೇಳಿದ್ದಾರೆ. 2012ರಲ್ಲಿ ತೆಲಂಗಾಣದ ನಿಜಾಂಬಾದ್ ಮತ್ತು ನಿರ್ಮಲ್ ಎಂಬಲ್ಲಿ ಅಕ್ಬರುದ್ದೀನ್ “15 ನಿಮಿಷ ಪೋಲಿಸರನ್ನ ಸೈಡ್ಗಿಟ್ಟು ನೋಡಿ ಏನ್ ಮಾಡ್ತೀವಿ ಅಂತ” ಪ್ರಚೋದನಕಾರಿ ಮತ್ತು ದ್ವೇಷಕಾರುವ ಭಾಷಣಗಳನ್ನ ಮಾಡಿದ್ರು. ಆ ವೀಡಿಯೋಗಳು ಯುಟ್ಯೂಬ್ನಲ್ಲಿ ಕೂಡ ಹರಿದಾಡಿದ್ವು. ಆದ್ರೂ ಕೂಡ ಅವ್ರು ಖುಲಾಸೆಗೊಂಡಿದ್ದಾರೆ.
-masthmagaa.com
Contact Us for Advertisement