masthmagaa.com:
ಬಿಜೆಪಿ ಪಕ್ಷದ ಹಿರಿಯ ನಾಯಕ ಮಾಜಿ ಸಿಎಂ, ಹಾಲಿ ಸಂಸದರಾಗಿರೋ ಸದಾನಂದಗೌಡ್ರು ಚುನಾವಣಾ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ. ಪಕ್ಷದಲ್ಲಿ ಬಿ.ಎಸ್. ಯಡಿಯುರಪ್ಪನವರ ಬಳಿಕ ನಾನೇ ಹೆಚ್ಚು ಹುದ್ದೆಗಳನ್ನ ಅಲಂಕರಿಸಿದವನಾಗಿದ್ದೇನೆ. 10 ವರ್ಷ ಶಾಸಕನಾಗಿ, 20 ವರ್ಷ ಎಂಪಿಯಾಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿ, ಶಾಸಕಾಂಗ ಪಕ್ಷದ ನಾಯಕನಾಗಿ ಹಾಗೂ ವಿರೋಧ ಪಕ್ಷದ ನೇತಾರನಾಗಿ ಕೆಲ್ಸ ಮಾಡೋದಕ್ಕೆ ಪಕ್ಷ ಅನುವು ಮಾಡಿ ಕೊಟ್ಟಿದೆ. ಅಲ್ದೇ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೀನಿ. ಜೊತೆಗೆ ರಾಷ್ಟ್ರ ರಾಜಕಾರಣದಲ್ಲಿ 7 ವರ್ಷ ಕೇಂದ್ರ ಮಂತ್ರಿಯಾಗಿ ಕಾರ್ಯ ನಿರ್ವಹಿಸೋಕೆ ಪಾರ್ಟಿ ಅನುವು ಮಾಡಿ ಕೊಟ್ತು. ಕಳೆದ ವರ್ಷಗಳಲ್ಲಿ ಇಷ್ಟೆಲ್ಲಾ ಅವಕಾಶ ನಂಗೆ ದೊರತಿದ್ದು ಇನ್ನೂ ಅಧಿಕಾರದಲ್ಲಿದ್ರೆ ಸ್ವಾರ್ಥಿಯಾದಂಗಾಗುತ್ತೆ ಅಂತ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೊ ಯಡಿಯೂರಪ್ಪ, ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ ಎಂದಿದ್ದಾರೆ.
-masthmagaa.com
Contact Us for Advertisement