masthmagaa.com:
ಬಿಟ್ ಕಾಯಿನ್ ಗಲಾಟೆ ಬಗ್ಗೆ ಇವತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದಾರೆ. ಹಣ್ಣು ತಿಂದಿದ್ದೂ ಅವರೇ, ಮೂತಿಗೆ ಒರೆಸಿದ್ದು ಕೂಡ ಅವರೇ ಎಂದಿದ್ದಾರೆ. 2018ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕಾಂಗ್ರೆಸ್ ಮುಖಂಡರ ಮಕ್ಕಳ ಜೊತೆ ಶ್ರೀಕಿ ಸಿಕ್ಕಿಬಿದ್ದಿದ್ದ. ಅವನ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ರು. ಆದ್ರೆ ಅರೆಸ್ಟ್ ಮಾಡಿರಲಿಲ್ಲ. ಯಾಕೆ ಅರೆಸ್ಟ್ ಮಾಡಿರಲಿಲ್ಲ ಹೇಳಿ. ಅವನು ಹೋಟೆಲ್ನಲ್ಲಿ ಏನು ವ್ಯವಹಾರ ಮಾಡ್ತಿದ್ದ ಅನ್ನೋದನ್ನೂ ಹೇಳಿ. ಇದೇ ಶ್ರೀಕಿ ನಂತ್ರ ಮಾದಕ ವಸ್ತು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. ಆಗ ನಮ್ಮ ಸರ್ಕಾರ ಇತ್ತು. ಅವನನ್ನ ಅರೆಸ್ಟ್ ಮಾಡಿದ್ದೆವು. ಈಗಲೂ ಸಹ ಪಾರದರ್ಶಕವಾಗಿ ತನಿಖೆ ನಡೆಸ್ತಿದ್ದೀವಿ. ಆದ್ರೆ ಕಾಂಗ್ರೆಸ್ನವರು ಬುಟ್ಟಿಯಲ್ಲಿ ಹಾವಿದೆ, ಬಿಟ್ ಬಿಡ್ತೀವಿ ಅಂತ ಹೇಳ್ತಿದ್ದಾರೆ. ಹಾವನ್ನ ಬಿಡಲಿ. ಅದು ಎಷ್ಟು ದೊಡ್ಡಡಿದೆ, ಯಾರಿಗೆ ಕಚ್ಚುತ್ತೆ, ಯಾರ್ ಸಾಯ್ತಾರೆ ನೋಡ್ಬಿಡಣ ಅಂತ ಆರಗ ಜ್ಞಾನೇಂದ್ರ ಹೇಳಿದ್ದಾರೆ.
-masthmagaa.com
Contact Us for Advertisement