ಬಿಟ್​​ ಕಾಯಿನ್ ಗಲಾಟೆ ಬಗ್ಗೆ ಗೃಹಸಚಿವರು ಹೇಳಿದ್ದೇನು?

masthmagaa.com:

ಬಿಟ್​​​ ಕಾಯಿನ್ ಗಲಾಟೆ ಬಗ್ಗೆ ಇವತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದಾರೆ. ಹಣ್ಣು ತಿಂದಿದ್ದೂ ಅವರೇ, ಮೂತಿಗೆ ಒರೆಸಿದ್ದು ಕೂಡ ಅವರೇ ಎಂದಿದ್ದಾರೆ. 2018ರಲ್ಲಿ ಕಾಂಗ್ರೆಸ್​ ಸರ್ಕಾರ ಇದ್ದಾಗ ಕಾಂಗ್ರೆಸ್​ ಮುಖಂಡರ ಮಕ್ಕಳ ಜೊತೆ ಶ್ರೀಕಿ ಸಿಕ್ಕಿಬಿದ್ದಿದ್ದ. ಅವನ ವಿರುದ್ಧ ಚಾರ್ಜ್​​ಶೀಟ್​ ಸಲ್ಲಿಸಿದ್ರು. ಆದ್ರೆ ಅರೆಸ್ಟ್ ಮಾಡಿರಲಿಲ್ಲ. ಯಾಕೆ ಅರೆಸ್ಟ್ ಮಾಡಿರಲಿಲ್ಲ ಹೇಳಿ. ಅವನು ಹೋಟೆಲ್​​ನಲ್ಲಿ ಏನು ವ್ಯವಹಾರ ಮಾಡ್ತಿದ್ದ ಅನ್ನೋದನ್ನೂ ಹೇಳಿ. ಇದೇ ಶ್ರೀಕಿ ನಂತ್ರ ಮಾದಕ ವಸ್ತು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. ಆಗ ನಮ್ಮ ಸರ್ಕಾರ ಇತ್ತು. ಅವನನ್ನ ಅರೆಸ್ಟ್ ಮಾಡಿದ್ದೆವು. ಈಗಲೂ ಸಹ ಪಾರದರ್ಶಕವಾಗಿ ತನಿಖೆ ನಡೆಸ್ತಿದ್ದೀವಿ. ಆದ್ರೆ ಕಾಂಗ್ರೆಸ್​​ನವರು ಬುಟ್ಟಿಯಲ್ಲಿ ಹಾವಿದೆ, ಬಿಟ್ ಬಿಡ್ತೀವಿ ಅಂತ ಹೇಳ್ತಿದ್ದಾರೆ. ಹಾವನ್ನ ​ಬಿಡಲಿ. ಅದು ಎಷ್ಟು ದೊಡ್ಡಡಿದೆ, ಯಾರಿಗೆ ಕಚ್ಚುತ್ತೆ, ಯಾರ್​ ಸಾಯ್ತಾರೆ ನೋಡ್ಬಿಡಣ ಅಂತ ಆರಗ ಜ್ಞಾನೇಂದ್ರ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply