masthmagaa.com:
ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿರಿಸುವಂತೆ ನ್ಯಾಯಾಲಯ ಆದೇಶಿಸಿದೆ. ಇಮ್ರಾನ್ರನ್ನ ಬಂಧಿಸಿದ್ದ ಪಂಜಾಬ್ ಪೊಲೀಸರು ಅವರನ್ನ ಪಂಜಾಬ್ ಪ್ರಾಂತ್ಯದ ಅಟೋಕ್ ಜೈಲಿನಲ್ಲಿ ಇರಿಸಿದ್ದರು. ಇದೀಗ ಸ್ಥಳಾಂತರ ಮಾಡಲಾಗಿದೆ ಅಂತ ತಿಳಿದು ಬಂದಿದೆ. ಇತ್ತ ಜೈಲಿನಲ್ಲಿರುವ ಇಮ್ರಾನ್ ಅವ್ರ ಜೀವಕ್ಕೆ ಅಪಾಯವಿದ್ದು, ಜೈಲು ಅಧಿಕಾರಿಗಳು ಊಟ ಕೂಡ ಕೊಡ್ತಿಲ್ಲ ಅಂತ PTI ಉಪಾಧ್ಯಕ್ಷ ಮೊಹಮ್ಮದ್ ಖುರೇಶಿ ಅವ್ರು ಆರೋಪಿಸಿದ್ದಾರೆ. ಜೊತೆಗೆ ಮಾಜಿ ಪ್ರಧಾನಿಯೊಬ್ರನ್ನ ʻಸಿ ಕ್ಲಾಸ್ʼ ಜೈಲಿನ ಸೆಲ್ನಲ್ಲಿ ಬಂಧಿಸಲಾಗಿದ್ದು, ಲಾಯರ್ನ ಕೂಡ ಒಳಗೆ ಪ್ರವೇಶಿಸೋಕೆ ಬಿಡ್ತಾಯಿಲ್ಲ. ಹೀಗಾಗಿ ಇಮ್ರಾನ್ರ ಸಹಿ ಇಲ್ಲದೆ ಅವರ ಬಿಡುಗಡೆಗೆ ಮನವಿ ಸಲ್ಲಿಸೋಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಇದೇ ವೇಳೆ ಖಾನ್ರ ಜೀವಕ್ಕೆ ಪಾಯವಿದ್ದು, ಈ ಬಗ್ಗೆ ನ್ಯಾಯಾಲಯ ಗಮನಹರಿಸಬೇಕು ಅಂತ ಖುರೇಶಿ ಒತ್ತಾಯಿಸಿದ್ದಾರೆ.
-masthmagaa.com
Contact Us for Advertisement