masthmagaa.com:
ಕ್ಯಾಬ್ ಒಂದು ಡಿಕ್ಕಿ ಹೊಡೆದ ಪರಿಣಾಮ ಇದೀಗ ಇಂಟೆಲ್ ಇಂಡಿಯಾದ ಮಾಜಿ ಮುಖ್ಯಸ್ಥ ಅವತಾರ್ ಸೈನಿ ಮೃತಪಟ್ಟಿದ್ದಾರೆ. ಇವ್ರು ತಮ್ಮ ಸೈಕಲ್ನಲ್ಲಿ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಹೋಗ್ತಿರೋವಾಗ ಕ್ಯಾಬ್ ಒಂದು ವೇಗವಾಗಿ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಅವತಾರ್ ಸೈನಿಯವ್ರಿಗೆ ತೀವ್ರ ಗಾಯಗಳಾಗಿದ್ವು. ತಕ್ಷಣವೇ ಇವ್ರೊಂದಿಗೆ ಸೈಕ್ಲಿಂಗ್ ಮಾಡ್ತಿದ್ದವ್ರು ಇವ್ರನ್ನ ಆಸ್ಪತ್ರೆಗೆ ಸಾಗಿಸಿದ್ರು. ಆದ್ರೆ ಯಾವ್ದೇ ಪ್ರಯೋಜನವಾಗ್ದೇ ಅವತಾರ್ ಸೈನಿ ಮೃತಪಟ್ಟಿದ್ದಾರೆ. ಹೀಗಂತ ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಕ್ಯಾಬ್ ಚಾಲಕನ ವಿರುದ್ಧ FIR ದಾಖಲಿಸಲಾಗಿದೆ.
-masthmagaa.com
Contact Us for Advertisement