masthmagaa.com:
ರಾಜ್ಯದಲ್ಲಿ ಭಾರೀ ಚರ್ಚೆಯಲ್ಲಿ ಇರುವ ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಮೊದಲ ವಿಕೆಟ್ ಬಿದ್ದಿದೆ. ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಅವ್ರನ್ನ ಎತ್ತಂಗಡಿ ಮಾಡಲಾಗಿದ್ದು ಆಂತರಿಕ ಭದ್ರತಾ ದಳದ ಎಡಿಜಿಪಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ. ಇನ್ನು ಅವ್ರ ಜಾಗಕ್ಕೆ ಈಗ ಹಿತೇಂದ್ರ ಅವ್ರನ್ನ ನೇಮಕ ಮಾಡಲಾಗಿದೆ. ಪೋಲಿಸ್ ನೇಮಕಾತಿ ವಿಭಾಗದಲ್ಲಿ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವ್ರು ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಅಂತ ಕಾಂಗ್ರೆಸ್ ಆರೋಪ ಮಾಡಿತ್ತು. ಅದ್ರ ಹಿನ್ನಲೆಯಲ್ಲಿಯೇ ಈಗ ಪೌಲ್ ಅವ್ರನ್ನ ವರ್ಗಾವಣೆ ಮಾಡಲಾಗಿದೆ. ಇನ್ನು ಸದ್ಯಕ್ಕೆ ತಲೆಮರೆಸಿಕೊಂಡಿರೋ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವ್ರ ಪ್ರಭಾವ ವ್ಯಾಪ್ತಿ ದಿನದಿಂದ ದಿನಕ್ಕೆ ದೊಡ್ಡದಾಗ್ತಾ ಹೋಗಿದೆ. ಹೋಂ ಮಿನಿಸ್ಟರ್ ಅರಗ ಜ್ಞಾನೇಂದ್ರ, ಮಾಜಿ ಸಿಎಂ ಬಿಎಸ್ವೈ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಂತ್ರ ಈಗ ದಿವ್ಯಾ ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್ ಜೊತೆಗೆ ಕೂತಿರೋ ಫೋಟೋ ವೈರಲ್ ಆಗ್ತಿದೆ. ಇಬ್ರು ರೈಲಿನಲ್ಲಿ ಕೂತಿರೋದು ಫೋಟೋದಲ್ಲಿ ಕಂಡುಬಂದಿದೆ. ಆದ್ರೆ ದಿವ್ಯಾ ಹಾಗರಗಿ ಮಾತ್ರ ಇನ್ನೂ ಅರೆಸ್ಟ್ ಆಗಿಲ್ಲ.
-masthmagaa.com
Contact Us for Advertisement