ಬಿಜೆಪಿ ನಾಯಕರ ವಿರುದ್ದದ ಕೇಸ್‌ಗಳಿಗೆ ತಡೆ ನೀಡಿದ ಹೈಕೋರ್ಟ್!

masthmagaa.com:

ವ್ಯಾಪಾರಿ ಮೇಲಿನ ಹಲ್ಲೆ ಕೇಸ್‌ನಲ್ಲಿ ಬಿಜೆಪಿ ಸಂಸದರ ಮೇಲಿನ FIRಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಅಲ್ಧೆ ತಮಿಳುಗರ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೇಸ್‌ಗೂ ಹೈಕೋರ್ಟ್‌ ತಡೆ ನೀಡಿದೆ. ಅಂದ್ಹಾಗೆ ತಮಿಳುಗರ ವಿರುದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಾಗೂ ಇನ್ನೊಂದೆಡೆ ವ್ಯಾಪಾರಿ ಮೇಲಿನ ಹಲ್ಲೆ ಖಂಡಿಸಿ ನಡೆದಿರೋ ಪ್ರತಿಭಟನೆ ವೇಳೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದ್ವೇಷದ ಭಾಷಣ ಮಾಡಿದ್ದಾರೆ ಅಂತೇಳಿ ಎರಡು ಪ್ರಕರಣಗಳಲ್ಲಿ ಬಿಜೆಪಿ ನಾಯಕರ ವಿರುದ್ದ ದೂರುಗಳು ದಾಖಲಾಗಿದ್ವು. ಆದ್ರೆ ಇವುಗಳಿಗೆ ಈಗ ಹೈಕೋರ್ಟ್‌ ತಡೆ ನೀಡಿದೆ.

-masthmagaa.com

Contact Us for Advertisement

Leave a Reply