masthmagaa.com:
ಭಾರಿ ಚರ್ಚೆಗೆ ಗ್ರಾಸವಾಗಿರೋ ಮಂಡ್ಯದ ಹನುಮ ಧ್ವಜದ ವಿವಾದ ಮತ್ತೊಂದು ಹಂತ ತಲುಪಿದೆ. ಫೆಬ್ರುವರಿ 2 ಕ್ಕೆ ಕೆರೆಗೋಡು ಗ್ರಾಮದಲ್ಲಿ ಕೇಸರಿ ಧ್ವಜದ ಅಭಿಯಾನಕ್ಕೆ ಕಮಲ ಪಡೆ ಕರೆ ನೀಡಿದೆ. ಆದ್ರೆ ಇದಕ್ಕೂ ಮೊದ್ಲೆ ಅಂದ್ರೆ ಇಂದು ಗ್ರಾಮದ ಎಲ್ಲ ಮನೆಗಳ ಮೇಲೂ ಗ್ರಾಮಸ್ಥರು ಕೇಸರಿ ಭಾವುಟ ಹಾರಿಸಿ ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಮತ್ತೊಂಡೆದೆ ಫೆಬ್ರುವರಿ 9ಕ್ಕೆ ಮಂಡ್ಯ ಬಂದ್ಗೆ ಭಜರಂಗದಳ ಕರೆ ನೀಡಿದೆ. ಇನ್ನು ಅತ್ತ ಕೋಲಾರದ ಕ್ಲಾಕ್ ಟವರ್ ಮೇಲಿರೋ ಅರ್ಧ ಚಂದ್ರ, ನಕ್ಷತ್ರದ ಗುರುತು ಕೂಡ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಮಂಡ್ಯದಲ್ಲಿ ಹನುಮ ಧ್ವಜ ತೆರವು ಮಾಡಿದಂತೆ, ಕೋಲಾರದಲ್ಲಿ ಅರ್ಧ ಚಂದ್ರ ಗುರುತು ತೆರವು ಮಾಡ್ಬೇಕು ಅನ್ನೋ ಬೇಡಿಕೆ ಕೇಳಿ ಬಂದಿದೆ.
-masthmagaa.com
Contact Us for Advertisement