masthmagaa.com:
ಬೆಂಗಳೂರಿನ ಮೆಜೆಸ್ಟಿಕ್ ಕೇಂದ್ರ ಬಸ್ ನಿಲ್ದಾಣ ಹಾಗೂ ಸುತ್ತಮುತ್ತ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ದೂರದ ಊರುಗಳಿಂದ ಬರುವ ಪ್ರಯಾಣಿಕರು ಭಯದಲ್ಲಿ ಓಡಾಡುವಂತಿದೆ. ಪೊಲೀಸರ ನಿರ್ಲಕ್ಷ್ಯ ಹಾಗೂ ಅಪರಾಧ ಪತ್ತೆ ವಿಳಂಬವಾಗ್ತಿರೋದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಲ್ದಾಣಕ್ಕೆ ಭೇಟಿ ನೀಡಿದ್ದ ಪ್ರಯಾಣಿಕರು ತಮ್ಮ ಚಿನ್ನ ಹಾಗೂ ಇತರೆ ವಸ್ತುಗಳನ್ನ ಕಳೆದುಕೊಂಡ ಹಲವು ಕೇಸ್ಗಳು ಒಂದೇ ತಿಂಗಳಲ್ಲಿ ಹೆಚ್ಚು ನಡೆದಿವೆ. ಕಳ್ಳತನ ಹಾಗೂ ಸುಲಿಗೆ ಕೇಸ್ಗಳು ಹೆಚ್ಚಾಗ್ತಿರೋದ್ರಿಂದ ನಿಲ್ದಾಣಕ್ಕೆ ಬರೋಕೆ ಜನ ಭಯಪಡುತ್ತಿದ್ದಾರೆ ಅಂತ ವ್ಯಾಪಾರಿಯೊಬ್ರು ಹೇಳಿದ್ದಾರೆ. ಇನ್ನು ಬಸ್ ಸ್ಟ್ಯಾಂಡ್ನಲ್ಲಿ ಅಪರಾಧ ತಡೆಗೆ ಆದ್ಯತೆ ನೀಡಲಾಗಿದೆ. ಎಲ್ಲಾ ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ KSRTC ಹಾಗೂ BMTC ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಅಂತ ಪೊಲೀಸ್ ಅಧಿಕಾರಿಯೊಬ್ರು ತಿಳಿಸಿದ್ದಾರೆ.
-masthmagaa.com
Contact Us for Advertisement