ಚಿರು ಸಾವಿನ ನಂತರ ಥಿಯೇಟರ್ ನಲ್ಲಿ ದೃಶ್ಯ 2 ಸಿನಿಮಾ ನೋಡಿದ ಮೇಘನಾ ರಾಜ್: ಕಾರಣ ಏನ್ ಗೊತ್ತಾ!?

masthmagaa.com:

ರವಿಚಂದ್ರನ್ ಅಭಿನಯದ ‘ದೃಶ್ಯ 2’ ಸಿನಿಮಾ ಶುಕ್ರವಾರ ಡಿ.10 ನೇ ತಾರೀಖು ಬಿಡುಗಡೆ ಆಗಿದೆ. ಚಿತ್ರವನ್ನ ರಮೇಶ್ ಅರವಿಂದ್, ಶರಣ್, ಉಪೇಂದ್ರ, ಮೇಘನಾ ರಾಜ್​, ಧ್ರುವ ಸರ್ಜಾ, ಧನಂಜಯ, ದೇವರಾಜ್‌, ಪ್ರಜ್ವಲ್‌ ದೇವರಾಜ್‌,  ಸೇರಿದಂತೆ ಮುಂತಾದದ ಸೆಲೆಬ್ರಿಟಿಗಳು ನೋಡಿ ಕಣ್ತುಂಬಿಕೊಂಡಿದ್ದಾರೆ. ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಚಿರು ಸಾವಿನ ನಂತರ ಥಿಯೇಟರ್ ಗೆ ಬಂದು ಯಾವುದೇ ಸಿನಿಮಾ ನೋಡಿರದ ಮೇಘನಾ ರಾಜ್ ದೃಶ್ಯ 2 ಸಿನಿಮಾವನ್ನ ನೋಡಿದ್ದಾರೆ. ಸಿನಿಮಾ ನೋಡಿ ಮಾತನಾಡಿರುವ ಅವರು, ‘ತುಂಬ ದಿನ ಆದಮೇಲೆ ನಾನು ಥಿಯೇಟರ್‌ ಬಂದು ಸಿನಿಮಾ ನೋಡ್ತಾ ಇರೋದು. ತುಂಬ ಜನಕ್ಕೆ ಗೊತ್ತಿಲ್ಲ. ನಾನು ರವಿಚಂದ್ರನ್ ಅಂಕಲ್‌ಗೆ ದೊಡ್ಡ ಫ್ಯಾನ್‌. ನಾನು ಚಿಕ್ಕವಳಿದ್ದಾಗ ಶೂಟಿಂಗ್‌ ಸೆಟ್‌ಗೆ ಹೋದಾಗ, ನಾನು ಬರ್ತಿನಿ ಅಂತ ಗೊತ್ತಾದ್ರೆ ಸಾಕು ರವಿ ಅಂಕಲ್ ಚಾಕೋಲೆಟ್ ತಂದು ಸೆಟ್ ಅಲ್ಲಿ ಇಟ್ಟಿರ್ತಾ ಇದ್ರು. ಅದೇ ರೀತಿ ಈಗಲೂ ಕೂಡ ಚಾಕೋಲೆಟ್ ಕಳಿಸಿ, ಪ್ರೀಮಿಯರ್‌ ಶೋಗೆ ಕರೆದಿದ್ದರು. ಹಾಗಾಗಿ ಬಂದೆ ಅಂತ ಹೇಳಿದ್ದಾರೆ.

ಬಹಳ ದಿನದ ನಂತರ ಒಂದು ಬ್ರಿಲಿಯಂಟ್ ಸಿನಿಮಾ ನೋಡಿದ ಖುಷಿ ನನಗೆ ಇದೆ. ತಂದೆ ರೂಪದಲ್ಲಿ ರವಿ ಅಂಕಲ್ ನ ತೆರೆಮೇಲೆ ನೋಡಿದಾಗ ನನಗೆ ತುಂಬ ಖುಷಿ ಆಯ್ತು. ಶಿವರಾಮಣ್ಣ ಅವರನ್ನು ಕೂಡ ಈ ಸಿನಿಮಾದಲ್ಲಿ ನೋಡಿದೆ. ಖುಷಿ ಆಯ್ತು. ನವ್ಯಾ ನಾಯರ್ ಕೂಡ ಚೆನ್ನಾಗಿ ನಟಿಸಿದ್ದಾರೆ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply