masthmagaa.com:
ಕಳೆದ ಒಂದು ವಾರದಿಂದ ಮುಂಗಾರು ಮಳೆಗೆ ಕಾಯುತ್ತಿದ್ದ ದೇಶದ ಜನರಿಗೆ ವರುಣ ಕರುಣೆ ತೋರಿದ್ದಾನೆ. ಮುಂಗಾರು ಮಳೆ ಕೇರಳಕ್ಕೆ ಆಗಮನವಾಗಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಪ್ರತಿ ವರ್ಷ ಜೂನ್ 1ರಂದು ಕೇರಳಕ್ಕೆ ಆಗಮಿಸುತ್ತಿದ್ದ ಮುಂಗಾರು, ಈ ವರ್ಷ ಒಂದು ವಾರ ಲೇಟ್ ಮಾಡಿ ಕೇರಳಕ್ಕೆ ಆಗಮಿಸಿದೆ. ಇನ್ನು ಒಂದೆರೆಡು ದಿನಗಳಲ್ಲಿ ಕರ್ನಾಟಕದಲ್ಲೂ ಮಳೆ ಆರಂಭವಾಗಲಿದೆ. ಮುಂಗಾರು ಒಂದು ವಾರ ತಡವಾಗಿದ್ದರೂ, ಬಿಪರ್ಜಾಯ್ ಚಂಡಮಾರುತದಿಂದ ಮಳೆಯ ಪ್ರಭಾವ ಹೆಚ್ಚಿರಲಿದೆ ಅಂತ ಹೇಳಲಾಗಿದೆ. ಅಂದ್ಹಾಗೆ ಕಳೆದ ಬಾರಿ ಮೇ 29ಕ್ಕೆ ಮಾನ್ಸೂನ್ ಮಾರುಗಳು ಕೇರಳಕ್ಕೆ ಪ್ರವೇಶಿಸಿದ್ದವು. ಸೋ ಕಳೆದ ಬಾರಿಗೆ ಹೋಲಿಸಿದ್ರೆ ಈ ಬಾರಿ 10 ದಿನ ಲೇಟ್ ಆಗಿ ಪ್ರವೇಶಿಸಿವೆ.
-masthmagaa.com
Contact Us for Advertisement