masthmagaa.com:
ರಾಜಸ್ಥಾನ್ ಸಿಎಂ ಅಶೋಕ್ ಗೆಹ್ಲೋಟ್ ಜಾರಿ ನಿರ್ದೇಶನಾಲಯವನ್ನ ನಾಯಿಗೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ. ನಿನ್ನೆಯಷ್ಟೇ ಗೆಹ್ಲೋಟ್ ಪುತ್ರ ವೈಭವ್ಗೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(FEMA) ಉಲ್ಲಂಘನೆ ಆರೋಪದಲ್ಲಿ ED ಸಮನ್ಸ್ ನೀಡಿತ್ತು. ಈ ಬೆನ್ನಲ್ಲೆ ಇಂದು ಅಶೋಕ್ ಗೆಹ್ಲೋಟ್ ನಾಯಿಗಳಿಗಿಂತ ಹೆಚ್ಚಾಗಿ ಹುಡುಕಾಡೊ ಕೆಲಸವನ್ನ ED ಮಾಡುತ್ತೆ ಅಂತೇಳಿ ವಿವಾದ ಸೃಷ್ಟಿಸಿದ್ದಾರೆ. ಅಂದ್ಹಾಗೆ ವೈಭವ್ ED ಬಳಿ 15 ದಿನಗಳ ಸಮಯ ಕೇಳಿದ್ದಾರೆ. ಆದ್ರೆ ನಾಲ್ಕು ದಿನಗಳಲ್ಲಿ ಅಂದ್ರೆ ಅಕ್ಟೋಬರ್ 30ರೊಳಗೆ ಹಾಜರಿರುವಂತೆ ED ಆದೇಶ ನೀಡಿದೆ.
-masthmagaa.com
Contact Us for Advertisement