ಪ್ರತಾಪ್ ಸಿಂಹಗೆ ಕೆಂಡ ಉಗುಳಿದ ಪ್ರಿಯಾಂಕ್ ಖರ್ಗೆ!

masthmagaa.com.com:

ಇನ್ನು ಬಿಟ್​​ ಕಾಯಿನ್​ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ವಾಗ್ದಾಳಿ ನಡೀತಿದೆ. ವಾಗ್ದಾಳಿ ಮಧ್ಯೆ ವೈಯಕ್ತಿಕ ವಿಚಾರಗಳನ್ನ ಕೂಡ ಉಲ್ಲೇಖಿಸಲಾಗ್ತಿದೆ. ತಮ್ಮ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಇವತ್ತು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಸಿಟ್ಟಿಗೆದ್ರು. ಪ್ರತಾಪ್​ ಸಿಂಹ ಒಳ್ಳೇ ಲೇಖಕರು ಅಂತಾರೆ. ಆದ್ರೆ ಅವರಿಗೆ ಕನ್ನಡನೂ ಸರಿಯಾಗಿ ಬರಲ್ಲ, ಇಂಗ್ಲಿಷೂ ಬರಲ್ಲ ಅಂತಾಯ್ತು. ನಂಗೆ ದಿನಾ ಮರಿ ಖರ್ಗೆ, ಮರಿ ಖರ್ಗೆ ಅಂತಾರೆ. ಹಾಗಿದ್ರೆ ವಿಜಯೇಂದ್ರ ಅವರಿಗೆ ಮರಿ ಯಡಿಯೂರಪ್ಪ ಅನ್ನೋ ಧೈರ್ಯ ಇದಿಯಾ ನಿಮ್ಗೆ.. ಅಮಿತ್​ ಶಾ ಜೈ ಶಾಗೆ ಛೋಟಾ ಶಾ ಅಂತ ಕರೆಸಿಕೊಳ್ಳೋ ಧೈರ್ಯ ಇದಿಯಾ. ಬೆತ್ತಲೆ ಪ್ರಪಂಚ ಅಂತ ಪುಸ್ತಕ ಬರೆದ್ರಿ. ಈಗ ಯಾರ ಜೊತೆ ಇದಿರಾ ನೋಡ್ಕೊಳ್ಳಿ. ಮಹಿಳಾ ಆಯೋಗದಲ್ಲಿ ಕೇಸ್​​ ಇರೋದು ಯಾರ ಮೇಲೆ? ಆಡಿಯೋ ಕ್ಲಿಪ್‌ಗೆ ಸ್ಟೇ ತಂದವರು ಯಾರು? ಡಿಗ್ನಿಫೈಯ್ಡ್ ಆಗಿ ನನ್ನ ಜೊತೆ ಯಾವುದಾದ್ರೂ ವಿಚಾರದ ಬಗ್ಗೆ ಚರ್ಚೆ ನಡೆಸೋಕೆ ಬಂದ್ರೆ ನಾನು ಚರ್ಚೆ ಮಾಡ್ತೀನಿ. ಅದನ್ನ ಬಿಟ್ಟು ನನ್ನ ಬಗ್ಗೆ, ನಮ್ಮ ಫ್ಯಾಮಿಲಿ ಬಗ್ಗೆ ಮಾತನಾಡಿದ್ರೆ ಸುಮ್ನೆ ಕೂರಲ್ಲ ಅಂತ ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply