ಇವರು ಇಫ್ತಾರ್ ಕೂಟದಲ್ಲಿ ಸಂವಿಧಾನ ಓದಿದ್ದೇಕೆ ಗೊತ್ತಾ?

masthmagaa.com:

ಮುಂಬೈನ ಕೆಲ ಚರ್ಚ್‌ಗಳಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದಾರೆ. ಇದರ ಆರಂಭಕ್ಕೂ ಮೊದ್ಲು ಸಂವಿಧಾನದ ಪೀಠಿಕೆಯನ್ನ ಓದಲಾಗಿದೆ. ಈ ಬಗ್ಗೆ ಮಾತನಾಡಿದ ಸೇಂಟ್‌ ಪೀಟರ್ಸ್‌ ಚರ್ಚ್‌ನ ಪಾದ್ರಿ ಡಾ ಫ್ರೇಜರ್‌ ಎಸ್‌ ಜೆ, ಅಲ್ಪಸಂಖ್ಯಾತರ ಮನೆ ಮತ್ತು ಅಂಗಡಿಗಳ ಮೇಲೆ ಇತ್ತೀಚಿಗೆ ನಡೆದ ಬುಲ್ಡೋಜರ್‌ ದಾಳಿಗಳ ಬಗ್ಗೆ ನೋವಿದೆ ಅಂತ ಹೇಳಿದ್ದಾರೆ. ಜೊತೆಗೆ ಈ ಕೂಟವನ್ನ ಅನ್ಯಾಯಕ್ಕೆ ಒಳಗಾದವ್ರ ಜೊತೆ ನಿಲ್ಲಲು ಆಯೋಜಿಸಿದ್ದೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply