masthmagaa.com:
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಇವತ್ತು, ಸಂಸತ್ ಕಲಾಪ ಸರಿಯಾಗಿ ನಡೆಯದೇ ಇದ್ದಿದ್ದಕ್ಕೆ ಕಟುವಾಗಿ ಟೀಕಿಸಿದ್ದಾರೆ. ಸಂಸತ್ನಲ್ಲಿ ಕಳೆದ ಅಧಿವೇಶನದಲ್ಲಿ ನಡೆದ ಗದ್ದಲಗಳ ಬಗ್ಗೆ ಮಾತನಾಡಲಿಲ್ಲ. ಆದ್ರೆ ಕಾನೂನುಗಳ ಬಗ್ಗೆ ಚರ್ಚೆ ನಡೆಯಬೇಕು ಅಂತ ಹೇಳಿದ್ರು. ಒಂದು ಸಮಯದಲ್ಲಿ ಎರಡೂ ಸದನಗಳು ವಕೀಲರಿಂದ ತುಂಬಿ ಹೋಗಿತ್ತು. ಅಂದ್ರೆ ವಕೀಲರೇ ಜಾಸ್ತಿ ಇರ್ತಿದ್ರು. ಆದ್ರೀಗ ಕಾನೂನುಗಳಲ್ಲಿ ಸ್ಪಷ್ಟತೆ ಇಲ್ಲ. ಈ ಕಾನೂನುಗಳ ಉದ್ದೇಶ ಏನು ಅನ್ನೋದೇ ನಮಗೆ ಗೊತ್ತಿಲ್ಲ. ಇದು ಸಾರ್ವಜನಿಕರಿಗೆ ಆಗ್ತಿರೋ ನಷ್ಟವಾಗಿದೆ. ಸದನದಲ್ಲಿ ಬುದ್ಧಿಜೀವಿಗಳು ಮತ್ತು ವಕೀಲರು ಇಲ್ಲದೇ ಇರೋ ಸಮಯದಲ್ಲಿ ಹೀಗೆಲ್ಲಾ ಆಗ್ತಿದೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ.. ಈ ಹಿಂದೆ ಸ್ವಾತಂತ್ರ್ಯ ಹೋರಾಟಗಾರರಲ್ಲೂ ವಕೀಲರು ಹೆಚ್ಚಾಗಿ ನೋಡೋಕೆ ಸಿಗ್ತಾರೆ. ರಾಜ್ಯಸಭೆ ಮತ್ತು ಲೋಕಸಭೆಯ ಮೊದಲ ಸದಸ್ಯರು ಕೂಡ ಹೆಚ್ಚಾಗಿ ವಕೀಲರೇ ಆಗಿದ್ರು ಅಂತ ಹೇಳಿದ್ದಾರೆ. ಜೊತೆಗೆ ಈಗಲೂ ಕಾನೂನು ಕ್ಷೇತ್ರದಲ್ಲಿರೋರು ಸಾರ್ವಜನಿಕ ಸೇವೆಗೆ ಸಮಯ ಮೀಸಲಿಡಬೇಕು ಅಂತ ಹೇಳಿದ್ದಾರೆ.
-masthmagaa.com
Contact Us for Advertisement