ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಮಹತ್ವದ ಸಭೆ! ಯಾಕೆ ಗೊತ್ತಾ?

masthmagaa.com:

ಕ್ಷಿಪಣಿ ಪರೀಕ್ಷೆಗಳಿಂದಲೇ ಸುದ್ದಿಯಾಗುವ ಉತ್ತರ ಕೊರಿಯಾದಲ್ಲಿಈಗ ಆಹಾರ ಸಮಸ್ಯೆ ವಿಪರೀತವಾಗಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಲ್ಲಿನ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಇದೀಗ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಮಾಡಿದ್ದಾರೆ. ಕೃಷಿ ಹಾಗೂ ಇನ್ನಿತರ ಆಹಾರ ವಲಯಗಳನ್ನ ಬೂಸ್ಟ್‌ ಮಾಡೋಕೆ ಸಭೆ ನಡೆಸಿದ್ದಾರೆ. ಹತ್ತು ಹಲವು ಸ್ಯಾಂಕ್ಷನ್‌ಗಳನ್ನ ಹೇರಿಸಿಕೊಂಡು ಕೂತಿರೋ ಉತ್ತರಕೊರಿಯಾಗೆ ಅಂತಾರಾಷ್ಟ್ರೀಯವಾಗಿ ಯಾವುದೇ ಸಹಾಯ ಸಿಗ್ತಾಯಿಲ್ಲ. ಅಲ್ದೇ ಬೇರೆ ದೇಶಗಳ ಹತ್ರ ಆಹಾರ ಸಹಾಯ ಪಡೆಯೋದು ನಮಗೆ ವಿಷಕ್ಕೆ ಸಮಾನ ಅಂತ ಉತ್ತರ ಕೊರಿಯಾದ ಸರ್ಕಾರ ಹೇಳ್ತಿದೆ. ಹೀಗಾಗಿ ಅಲ್ಲಿನ ಜನರು ಆಹಾರ ಇಲ್ದೇ ತೀವ್ರ ಬಿಕ್ಕಟ್ಟನ್ನ ಎದುರಿಸ್ತಿದ್ದಾರೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply