masthmagaa.com:
ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಪ್ರಮುಖ ಮೂರು ರಾಜ್ಯಗಳನ್ನು ಗೆದ್ದು ಬೀಗುತ್ತಿರುವ ಬಿಜೆಪಿಯ ಸಂಸದೀಯ ಪಕ್ಷ ಸಭೆ ದೆಹಲಿಯಲ್ಲಿ ನಡೆದಿದೆ. ಸಭೆಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿ, ಅವರ ನಾಯಕತ್ವಕ್ಕೆ ಬಹುಪರಾಕ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ‘ಮೂರು ರಾಜ್ಯಗಳ ಗೆಲುವು ಯಾರ ವೈಯಕ್ತಿಕ ಗೆಲುವಲ್ಲ, ಇದು ಪಕ್ಷದ ಸಾಮೂಹಿಕ ಗೆಲುವು. ಸರ್ಕಾರ ನಡೆಸಲು ಬಿಜೆಪಿ ಯೋಗ್ಯ ಪಕ್ಷ ಎಂದು ಜನ ನಿರ್ಧರಿಸಿದ್ದಾರೆ. ಜನರ ಆಶೋತ್ತರಗಳಿಗೆ ತಕ್ಕಂತೆ ಆಡಳಿತ ನಡೆಸಬೇಕಾದದ್ದು ನಮ್ಮ ಕೆಲಸ’. ಮೋದಿ ಜಿ, ಮೋದಿ ಜಿ ಅಂತ ಕರೆದು ನನ್ನನ್ನು ಸಾರ್ವಜನಿಕರಿಂದ ದೂರ ಮಾಡಬೇಡಿ, ನಾನು ಮೋದಿ ಅಷ್ಟೇʼ ಎಂದಿದ್ದಾರೆ. ಬಿಜೆಪಿ ಕಾರ್ಯಕರ್ತರ ಕಠಿಣ ಪರಿಶ್ರಮದಿಂದ ನಾವಿಂದು ಮೂರು ರಾಜ್ಯಗಳ ಚುನಾವಣೆಯಲ್ಲಿ ಗೆದ್ದಿದ್ದೇವೆ. ಇಲ್ಲಿ ಪ್ರತಿಯೊಬ್ಬರ ಕೆಲಸ, ಶ್ರಮ ಮುಖ್ಯವಾಗಿರುತ್ತೆ ಅಂತ ತಿಳಿಸಿದ್ರು. ಡಿಸೆಂಬರ್ 22ರಿಂದ ಜನವರಿ 25ರವರೆಗೆ ನಡೆಯುವ ವಿಕಾಸ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಸಂಸದರು ಮತ್ತು ಸಚಿವರು ಭಾಗಿಯಾಗಬೇಕೆಂದು ಹೇಳಿದ್ದಾರೆ.
-masthmagaa.com
Contact Us for Advertisement